Advertisement
ಹೊಸ ಆ್ಯಪ್, ಪರಿಹಾರ: ಏತನ್ಮಧ್ಯೆ, ಪ್ರವಾಹ ಪೀಡಿತ ಪ್ರಾಂತ್ಯಗಳಲ್ಲಿನ ಅವ್ಯವಸ್ಥೆಗಳನ್ನು ಬೇಗನೇ ಸ್ಥಳೀಯ ಸರಕಾರಗಳ ಗಮನಕ್ಕೆ ತರುವ ಉದ್ದೇಶದಿಂದಾಗಿ, ಸರಕಾರ ಹೊಸ ಆ್ಯಪ್ ವ್ಯವಸ್ಥೆ ಜಾರಿಗೆ ತಂದಿಗೆ. ಜನರು ತಾವಿರುವ ವಾಸಸ್ಥಳದಲ್ಲಿರುವ ಅವ್ಯವಸ್ಥೆಯನ್ನು ಮೊಬೈಲ್ಗಳಲ್ಲಿ ಚಿತ್ರೀಕರಿಸಿ ವಿಡಿಯೋ ತುಣುಕನ್ನು ಈ ಆ್ಯಪ್ನಲ್ಲಿ ಅಪ್ಲೋಡ್ ಮಾಡಿ ತ್ವರಿತ ಸಹಾಯ ಪಡೆಯಬಹುದು. ಮುಖ್ಯಮಂತ್ರಿ ಸಂತ್ರಸ್ತರ ಪರಿಹಾರ ನಿಧಿಯಿಂದ 3.9 ಲಕ್ಷ ಕುಟುಂಬಗಳ ಪ್ರತಿಯೊಬ್ಬ ಸದಸ್ಯನ ಬ್ಯಾಂಕ್ ಖಾತೆಗೆ ತಲಾ 10,000 ರೂ. ಹಾಕಲು ಸರಕಾರ ತೀರ್ಮಾನಿಸಿದೆ.
ಟ್ವಿಟರ್ನಲ್ಲಿ ಓಣಂ ಶುಭಾಶಯ ಸಲ್ಲಿಸಿರುವ ಪ್ರಧಾನಿ ಮೋದಿ, ಈ ಬಾರಿಯ ಓಣಂ ಕೇರಳದ ಜನರಿಗೆ ಮಾನಸಿಕ ಸ್ಥೈರ್ಯ ತರಲಿ ಎಂದು ಆಶಿಸಿದ್ದಾರೆ. ಜತೆಗೆ, ಕೇರಳದ ಬೆನ್ನಿಗೆ ಕೇಂದ್ರ ಸರಕಾರ ಎಂದಿಗೂ ಇರಲಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.
Related Articles
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಆ.8ರಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 265. ನಾಪತ್ತೆಯಾದ 36 ಮಂದಿಯ ಸುಳಿವು ಸಿಕ್ಕಿಲ್ಲ. ಇದೇ ವೇಳೆ, ಪ್ರವಾಹ ಪೀಡಿತ ಪ್ರಾಂತ್ಯದಲ್ಲಿ 1,31,683 ಮನೆಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ. ಕೆಟ್ಟು ಹೋಗಿದ್ದ 23.36 ಲಕ್ಷ ಟ್ರಾನ್ಸ್ಫಾರ್ಮರ್ಗಳನ್ನು ದುರಸ್ತಿಗೊಳಿಸಲಾಗಿದೆ ಎಂದು ಕೇರಳ ಸರಕಾರ ಹೇಳಿದೆ. ರಾಜ್ಯದಲ್ಲಿ ಹಾಳಾಗಿರುವ ಒಟ್ಟಾರೆ ಮನೆಗಳಲ್ಲಿ ಶೇ.31 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಹಾನಿಗೀಡಾದ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ತಲಾ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಲಾಗಿದೆ.
Advertisement