Advertisement

ರಾಷ್ಟ್ರಪತಿಗೆ ಸ್ವಾಗತ; ಆದರೆ ಸಂಘದವರಿಗಲ್ಲ:AMU ವಿದ್ಯಾರ್ಥಿ ಸಂಘ

03:42 PM Feb 24, 2018 | udayavani editorial |

ಲಕ್ನೋ : ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಮಾರ್ಚ್‌ 7ರಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಈಗಲೇ ಆ ಬಗ್ಗೆ ವಿವಾದವೊಂದು ಹುಟ್ಟಿಕೊಂಡಿದೆ.

Advertisement

“ರಾಷ್ಟ್ರಪತಿಯವರಿಗೆ ಸ್ವಾಗತವಿದೆ; ಆದರೆ ಸಂಘ-ಮನೋಭಾವದ ಯಾವುದೇ ವ್ಯಕ್ತಿಗೆ ಪ್ರವೇಶವಿಲ್ಲ’ ಎಂದು ಎಎಂಯು ವಿದ್ಯಾರ್ಥಿ ಸಂಘ ಹೇಳಿರುವುದಾಗಿ ವರದಿಯಾಗಿದೆ.

“ನಾವು ರಾಷ್ಟ್ರಪತಿಗಳನ್ನು ವಿರೋಧಿಸುವುದಿಲ್ಲ; ಆದರೆ ಸಂಘ-ಮನೋಭಾವದವರನ್ನು ವಿರೋಧಿಸುತ್ತೇವೆ. 2010ರಲ್ಲಿ ರಾಷ್ಟ್ರಪತಿಗಳು “ಮುಸ್ಲಿಮರು ಮತ್ತು ಕ್ರೈಸ್ತರು ಹೊರಗಿನವರು; ಇಂದಿಗೂ ನಮ್ಮನ್ನಿದು ಕಾಡುತ್ತಿದೆ’ ಎಂದು ಹೇಳಿದ್ದರು. ಅವರು ಹಾಗೆ ಹೇಳಿದ ಹೊರತಾಗಿಯೂ ನಾವು ಅವರನ್ನು ಸ್ವಾಗತಿಸುತ್ತೇವೆ’ ಎಂದು ಎಎಂಯು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next