Advertisement

ಮಿಸೈಲ್ ಮ್ಯಾನ್: ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಅಬ್ದುಲ್ ಕಲಾಂ ಆರನೇ ಪುಣ್ಯಸ್ಮರಣೆ

03:39 PM Jul 27, 2021 | Team Udayavani |

ನವದೆಹಲಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಆರನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಂಗಳವಾರ (ಜುಲೈ27) ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ನೂರಾರು ಗಣ್ಯರು ಗೌರವಾರ್ಪಣೆ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ:ಐಎಂಡಿಬಿ ರೇಟಿಂಗ್ ನಲ್ಲಿ ಟಾಪ್ : ಜೋರಾಗಿದೆ ಕಿಚ್ಚನ ‘ವಿಕ್ರಾಂತ್ ರೋಣ’ ಕ್ರೇಜ್

ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂಜೀ, ಮಾಜಿ ರಾಷ್ಟ್ರಪತಿ ಮಿಸೈಲ್ ಮ್ಯಾನ್ ಎಂದೇ ಜನಪ್ರಿಯಗೊಂಡಿದ್ದರು. ಮಹಾನ್ ವಿಜ್ಞಾನಿಯಾಗಿದ್ದ ಕಲಾಂ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಭಾರತ ಅಣುಶಕ್ತಿ ರಾಷ್ಟ್ರವಾಗುವಲ್ಲಿ ಕಲಾಂ ಮಹತ್ವದ ಪಾತ್ರವಹಿಸಿದ್ದರು. ಅವರು ನಿಧನರಾಗಿ ಇಂದಿಗೆ ಆರು ವರ್ಷವಾದರೂ ಕೂಡಾ ಅವರ ಸಾಧನೆ, ಸ್ಫೂರ್ತಿ ಸದಾ ನಮಗೆ ದಾರಿದೀಪವಾಗಲಿದೆ ಎಂದು ನಡ್ಡಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಕೇವಲ ವಿಜ್ಞಾನಿಯಾಗಿ ಮಾತ್ರ ದೇಶಕ್ಕೆ ಕೊಡುಗೆಯನ್ನು ನೀಡಿಲ್ಲ. ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಪಕ್ಷ ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ಕಲಾಂ “ಜನರ ರಾಷ್ಟ್ರಪತಿ” ಎಂದೇ ಗುರುತಿಸಿಕೊಂಡಿದ್ದರು.

ಎಪಿಜೆ ಅಬ್ದುಲ್ ಕಲಾಂ ಅವರು ಡಿಆರ್ ಡಿಒ ಮತ್ತು ಇಸ್ರೋದಲ್ಲಿಯೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪಿಎಸ್ ಎಲ್ ವಿ ಟೆಕ್ನಾಲಜಿ ಅಭಿವೃದ್ಧಿಪಡಿಸುವಲ್ಲಿ ಕಲಾಂ ಮುಖ್ಯ ಪಾತ್ರ ವಹಿಸಿದ್ದರು. ಕಲಾಂ ಅವರ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. 2002 ಜುಲೈ 25ರಿಂದ 2007ರ ಜುಲೈ 25ರವರೆಗೆ ರಾಷ್ಟ್ರಪತಿಯಾಗಿದ್ದು. 2015ರ ಜುಲೈ 27ರಂದು ವಿಧಿವಶರಾಗಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next