Advertisement

ವಿದ್ಯುತ್‌ ಕಡಿತಗೊಂಡರೂ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

10:00 PM May 06, 2023 | Team Udayavani |

ಬರಿಪದ: ಒಡಿಶಾದ ಬಡಿಪದ ನಗರದಲ್ಲಿರುವ ಮಹಾರಾಜ ಶ್ರೀ ರಾಮಚಂದ್ರ ಬಂಜದೇಯೊ ವಿವಿಯ 12ನೇ ಘಟಿಕೋತ್ಸವದಲ್ಲಿ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಘಟಿಕೋತ್ಸವ ಭಾಷಣದ ವೇಳೆ ವಿದ್ಯುತ್‌ ಕಡಿತವಾಗಿದೆ. 11.56ರಿಂದ 12.05 ರವೆರೆಗೆ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು. ಇದರ ಹೊರತಾಗಿಯೂ ರಾಷ್ಟ್ರಪತಿಗಳು ಭಾಷಣ ಮುಂದುವರಿಸಿದರು. ಸಭಾಂಗಣದಲ್ಲಿ ಹಾಜರಿದ್ದವರು ಮೌನವಾಗಿ ಕುಳಿತು ಅದನ್ನು ಆಲಿಸಿದ್ದರು. “ಎಲೆಕ್ಟ್ರಿಕ್‌ ವೈರಿಂಗ್‌ನಲ್ಲಿ ದೋಷವಿದ್ದ ಹಿನ್ನೆಲೆಯಲ್ಲಿ ವಿದ್ಯುತ್‌ ಕಡಿತಗೊಂಡಿತ್ತು,” ಎಂದು ಟಾಟಾ ಪವರ್‌, ಉತ್ತರ ಒಡಿಶಾ ಇಂಧನ ಸರಬರಾಜು ಲಿ. ಸಿಇಒ ಭಾಸ್ಕರ್‌ ಸರ್ಕಾರ್‌ ತಿಳಿಸಿದ್ದಾರೆ. ಅಡಚಣೆಗಾಗಿ ವಿವಿ ಕುಲಪತಿ ಸಂತೋಷ್‌ ಕುಮಾರ್‌ ತ್ರಿಪಾಠಿ ಕ್ಷಮೆಯಾಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next