Advertisement

“ಒಡೆಯ’ಎಂಟ್ರಿಗೆ ಸಿದ್ಧತೆ ಜೋರು

09:31 AM Sep 22, 2019 | Lakshmi GovindaRaju |

ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಚಿತ್ರದ 50ನೇ ದಿನದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ನಡುವೆಯೇ ದರ್ಶನ್‌ ತಮ್ಮ ಟ್ವೀಟರ್‌ನಲ್ಲಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅದು “ಒಡೆಯ’.

Advertisement

ದರ್ಶನ್‌ “ಒಡೆಯ’ ಚಿತ್ರವನ್ನು ಒಪ್ಪಿಕೊಂಡಿದ್ದು, ಸದ್ದಿಲ್ಲದೇ ಆ ಚಿತ್ರದ ಚಿತ್ರೀಕರಣ ಮುಗಿಸಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ದರ್ಶನ್‌ ಈಗ ಚಿತ್ರದ ಖಡಕ್‌ ಲುಕ್‌ನ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಮಾಸ್‌ ಸಿನಿಮಾ ಮೂಲಕ ಎಂಟ್ರಿಕೊಡುತ್ತಿರುವ ಸುಳಿವು ನೀಡಿದ್ದಾರೆ. ಎಂ.ಡಿ.ಶ್ರೀಧರ್‌ ಈ ಚಿತ್ರದ ನಿರ್ದೇಶಕರು.

ಸಂದೇಶ್‌ ನಾಗರಾಜ್‌ ನಿರ್ಮಾಣದ ಈ ಚಿತ್ರದಲ್ಲಿ ದರ್ಶನ್‌ ಜೊತೆ ಪಂಕಜ್‌, ಯಶಸ್‌ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ. ದರ್ಶನ್‌ ತಮ್ಮ ಸಿನಿಮಾ ವಿಚಾರದಲ್ಲಿ ತಮ್ಮದೇ ಆದ ನಿಯಮ ಮಾಡಿದ್ದಾರೆ. ಅದು ಒಂದು ಸಿನಿಮಾ ಬಿಡುಗಡೆಯಾಗುವ ಮೊದಲು ಇನ್ನೊಂದು ಸಿನಿಮಾದ ಸುದ್ದಿಯಾಗಲಿ, ಫೋಟೋ ಆಗಲಿ ಬಿಡುವುದಿಲ್ಲವೆಂದು. ಅದೇ ಕಾರಣಕ್ಕೆ ಇಷ್ಟು ದಿನ “ಕುರುಕ್ಷೇತ್ರ’ ಬಿಟ್ಟು ಬೇರೆ ಸಿನಿಮಾ ಬಗ್ಗೆ ದರ್ಶನ್‌ ಮಾತನಾಡಿದ್ದು ಕಡಿಮೆ.

ಈಗ “ಕುರುಕ್ಷೇತ್ರ’ ಚಿತ್ರ 50 ದಿನಗಳನ್ನು ಪೂರೈಸುತ್ತಿದೆ. ಮುಂದಿನ ಚಿತ್ರವಾಗಿ “ಒಡೆಯ’ ಬಿಡುಗಡೆಯಾಗಲಿದೆ. ಇದು ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಈಗಾಗಲೇ ದರ್ಶನ್‌ ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್‌ ಕಾಂಬಿನೇಶನ್‌ನಲ್ಲಿ “ಪೊರ್ಕಿ’, “ಬುಲ್‌ ಬುಲ್‌’ ಚಿತ್ರಗಳು ಬಂದಿವೆ. ಈಗ “ಒಡೆಯ’ ಮೂರನೇ ಚಿತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next