Advertisement

Maharashtra,ಬಿಸಿಲಾಘಾತಕ್ಕೆ ತುಂಬು ಗರ್ಭಿಣಿ ಮೃತ್ಯು

11:48 PM May 15, 2023 | Team Udayavani |

ಪಾಲ್ಘರ್/ ಇಟಾವಾ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸೊನಾಲಿ ವಾಘತ್‌ ಎಂಬ ತುಂಬು ಗರ್ಭಿಣಿ ಬಿಸಿಲಾಘಾತಕ್ಕೆ ಬಲಿಯಾಗಿ­ದ್ದಾರೆ.

Advertisement

ಜಿಲ್ಲೆಯ ಒಸಾರ್‌ ವೀರಾ ಗ್ರಾಮದಿಂದ ಆಸ್ಪತ್ರೆಗೆ ತೆರಳುವ ನಿಟ್ಟಿನಲ್ಲಿ ಸುಡು ಬಿಸಿಲಿನಲ್ಲಿ 3.5 ಕಿಮೀ ನಡೆದು ಅನಂ ತರ ಆಟೋದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆ­ಯಿಂದ ಮನೆಗೆ ತೆರಳುವ ಸಂದರ್ಭದಲ್ಲೂ 3.5 ಕಿಮೀ ನಡೆದು ಮನೆ ತಲುಪಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಸಂಜೆಯ ವೇಳೆ ಅವರು ಅಸ್ವಸ್ಥಗೊಂಡಿದ್ದಾರೆ. ಜಿಲ್ಲಾ ಸ್ಪತ್ರೆಗೆ ದಾಖಲಿಸಿ­ದಾಗ ಅವರು ಕೊನೆ ಯುಸಿರೆಳೆದಿದ್ದಾರೆ ಎಂದು ವೈದ್ಯ ಡಾ| ಸಂಜಯ ಬೊಡಾಡೆ ಘೋಷಿಸಿ­ದ್ದಾರೆ.

ಇಬ್ಬರ ಮೃತ್ಯು: ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಧೂಳಿನ ಬಿರುಗಾಳಿ ಬೀಸಿದ ಪ್ರಕರಣಗಳಲ್ಲಿ ಇಬ್ಬರು ಅಸುನೀಗಿದ್ದಾರೆ. ಧಾರ್ವಾರ್‌ ಗ್ರಾಮದಲ್ಲಿ 45 ವರ್ಷದ ಮಹಿಳೆ ಅಸುನೀಗಿದ್ದರೆ, ನಗ್ಲಾ ಲಕ್ಷ್ಮೀ ಎಂಬ ಗ್ರಾಮದಲ್ಲಿ 10 ವರ್ಷದ ಬಾಲಕ ಅಸುನೀಗಿದ್ದಾರೆ. ಇಟಾವಾ ನಗರದಲ್ಲಿ 60 ವರ್ಷದ ವೃದ್ಧೆ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿರುಗಾಳಿಯ ರಭಸಕ್ಕೆ ಜಿಲ್ಲೆಯ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next