Advertisement

ರೈಲಿನೊಳಗೆ ಸಿಗರೇಟ್ ಸೇದಬಾರದು ಎಂದು ಆಕ್ಷೇಪಿಸಿದ ಗರ್ಭಿಣಿ ಹತ್ಯೆ!

06:05 PM Nov 10, 2018 | Team Udayavani |

ಶಹಜಹಾನ್ ಪುರ್: ರೈಲಿನಲ್ಲಿ ಸಿಗರೇಟು ಸೇದಬಾರದು ಎಂದು ಸಹಪ್ರಯಾಣಿಕನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಗರ್ಭಿಣಿ ಮಹಿಳೆಯನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.

Advertisement

ಶುಕ್ರವಾರ ರಾತ್ರಿ ಚಿನಾಟ್ ದೇವಿ(45ವರ್ಷ) ತನ್ನ ಕುಟುಂಬ ಸದಸ್ಯರ ಜೊತೆ ಪಂಜಾಬ್-ಬಿಹಾರ್ ಜಲಿಯನ್ ವಾಲಾ ಎಕ್ಸ್ ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಹ ಪ್ರಯಾಣಿಕನೊಬ್ಬ ಸಿಗರೇಟ್ ಸೇದುತ್ತಿರುವುದನ್ನು ಗಮನಿಸಿದ ದೇವಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ವೇಳೆ ವಾಗ್ವಾದ ನಡೆದಿದ್ದು,  ಸಿಗರೇಟ್ ಸೇದುತ್ತಿದ್ದ ಸೋನು ಯಾದವ್ ಎಂಬ ವ್ಯಕ್ತಿ ಆಕೆಯ ಕತ್ತನ್ನು ಬಲವಾಗಿ ಹಿಸುಕಿಬಿಟ್ಟಿದ್ದ. ಕೂಡಲೇ ಶಹಜಹಾನ್ ಪುರ್ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲುಗಡೆಗೊಳಿಸಿ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಎಕೆ ಪಾಂಡೆ ಮಾಹಿತಿ ನೀಡಿದ್ದಾರೆ.

ಛಾತ್ ಪೂಜೆಗಾಗಿ ಮಹಿಳೆ ಮತ್ತು ಕುಟಂಬ ಸದಸ್ಯರು ರೈಲಿನಲ್ಲಿ ಬಿಹಾರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆರೋಪಿ ಯಾದವ್ ನನ್ನು ಪೊಲೀಸರು ಬಂಧಿಸಿರುವುದಾಗಿ ಪಾಂಡೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next