Advertisement

ಮಡಿದ ವೀರಯೋಧರಿಗಾಗಿ ಚರ್ಚ್‌ಗಳಲ್ಲಿ ಪ್ರಾರ್ಥನೆ 

04:52 AM Feb 18, 2019 | |

ಮಹಾನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14ರಂದು ಸಿಆರ್‌ಪಿಎಫ್‌ ಪಡೆಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯನ್ನು ಮಂಗಳೂರು ಕೆಥೋಲಿಕ್‌ ಕ್ರೈಸ್ತ ಧರ್ಮಪ್ರಾಂತ ತೀವ್ರವಾಗಿ ಖಂಡಿಸಿದ್ದು, ಈ ಘಟನೆಯಲ್ಲಿ 42 ಜವಾನರು ಪ್ರಾಣ ತೆತ್ತು ಇತರ ಹಲವರು ಗಾಯಗೊಂಡಿರುವ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದೆ.

Advertisement

ಈ ಅಮಾನವೀಯ ಕೃತ್ಯದಲ್ಲಿ ಮಡಿದ ಯೋಧರ ಆತ್ಮಗಳಿಗೆ ಶಾಂತಿ ಲಭಿಸುವಂತೆ ಹಾಗೂ ಅವರ ಕುಟುಂಬಗಳಿಗಾಗಿ ರವಿವಾರ ಧರ್ಮ ಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಬಲಿಪೂಜೆಯ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ರೊಜಾರಿಯೋ ಕೆಥೆಡ್ರಲ್‌ ನಲ್ಲಿ ವಂ| ಜೆ.ಬಿ. ಕ್ರಾಸ್ತಾ, ವಂ| ರೊಕಿ ಫೆರ್ನಾಂಡಿಸ್‌, ವಂ| ವಿಕ್ಟರ್‌ ಡಿ’ಸೋಜಾ ನೇತೃತ್ವವಹಿಸಿದ್ದರು.

ಈ ಘಟನೆಯಲ್ಲಿ ಮಡಿದವರು ಮತು ಸಂತ್ರಸ್ತರಾದವರು ನಮ್ಮ ಸಹ ಪ್ರಜೆಗಳಾಗಿದ್ದು, ಅವರ ಜತೆ ಏಕತೆಯನ್ನು ಪ್ರದರ್ಶಿಸಿ ರವಿವಾರ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವಂತೆ ಬಿಷಪ್‌ ವಂ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ಕರೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next