Advertisement

Sandalwood; ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

05:13 PM May 10, 2024 | Team Udayavani |

ಸಿನಿಮಾ ರಂಗದಲ್ಲಿ ಗಟ್ಟಿ ನೆಲೆಕಂಡು ಕೊಳ್ಳಬೇಕು, ಹೊಸ ಬಗೆಯ ಚಿತ್ರಗಳನ್ನು ಮಾಡಬೇಕು ಎಂದು ಕನಸು ಕಂಡು ಚಿತ್ರರಂಗಕ್ಕೆ ಬರುವವರು ಅನೇಕರು. ಆದರೆ, ಎಲ್ಲರ ಕನಸು ಈಡೇರುತ್ತದೆ ಎಂದು ಹೇಳುವುದು ಕಷ್ಟ. ಇದೇ ರೀತಿ ಸಿನಿಮಾ ನಿರ್ದೇಶನದ ಕನಸು ಕಂಡು ಚಿತ್ರರಂಗ ಬಂದಿರುವ ನವನಿರ್ದೇಶಕ ಪ್ರವೀಣ್‌ ಸಿ.ಪಿ ಅವರ ಹೊಸ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಎವಿಡೆನ್ಸ್‌’. ಈ ಚಿತ್ರ ಮೇ 24ರಂದು ತೆರೆಕಾಣುತ್ತಿದೆ.

Advertisement

ಪ್ರವೀಣ್‌ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ. ಉಪೇಂದ್ರ ಅವರ ಜೊತೆ ಶ್‌.. ಚಿತ್ರದಿಂದಲೂ ಇದ್ದವರು. ಉಪ್ಪಿ ಜೊತೆ ಶ್‌ ಚಿತ್ರದಿಂದ ಹಿಡಿದು ಉಪೇಂದ್ರ-2 ವರೆಗೂ ಕೆಲಸ ಮಾಡಿದ್ದಾರೆ. ಅಲ್ಲಿ ಸಿನಿಮಾ ಮೇಕಿಂಗ್‌ ನ ವಿವಿಧ ಹಂತಗಳನ್ನು ಕಲಿತುಕೊಂಡಿದ್ದಾರೆ. ಅಲ್ಲದೆ ಕೃಪಾಕರ ಅವರ ಜೊತೆಸೇರಿ ಸಂಗೀತದ ಬಗ್ಗೆ ತಿಳಿದುಕೊಂಡಿದ್ದಾರೆ.

ಕೋವಿಡ್‌ ಲಾಕ್ ಡೌನ್‌ ಸಮಯದಲ್ಲಿ ಛಾಯಾಗ್ರಾಹಕ ರವಿ ಸುವರ್ಣ ಅವರ ಜೊತೆ ಸೇರಿ ಮಾಡಿದ ಸಿನಿಮಾ “ಎವಿಡೆನ್ಸ್‌’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.

ಡಾ.ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್‌ ಪ್ರಭು, ಕೆ.ಮಾದೇಶ್‌, ನಟರಾಜ್‌ ಸಿ.ಎಸ್‌, ಅರವಿಂದ್‌ ಅಚ್ಚು, ಎಂ.ಎನ್‌.ರವೀಂದ್ರರಾವ್‌, ಪ್ರಶಾಂತ್‌ ಸಿ.ಪಿ. ರಮೇಶ್‌ ಕೆ, ಕಿಶೋರ್‌ ಬಾಬು ಮತ್ತು ನರಸಿಂಹಮೂರ್ತಿ ಇವರಿಗೆ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next