Advertisement

ಮಸ್ಕಿಯಲ್ಲಿ ಮುದುಡಿದ ಕಮಲ : ಸೋಲಿನ ಹತಾಶೆಯಿಂದ ಹೊರನಡೆದ ಪ್ರತಾಪಗೌಡ

11:24 AM May 02, 2021 | Team Udayavani |

ರಾಯಚೂರು: ಮಸ್ಕಿ ಉಪಚುನಾವಣೆ ಮತ ಎಣಿಕೆಯ 16 ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲಿನ ಹತಾಷೆಯಿಂದ ಹೊರ ನಡೆದರು.

Advertisement

ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ. ಅಲ್ಲದೇ ಬಿಜೆಪಿ ಬೆಂಬಲಿತ ಭಾಗದಲ್ಲೇ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರಿಂದ ಪ್ರತಾಪ ಗೌಡ ಸೋಲೊಪ್ಪಿಕೊಂಡು ಹೊರ ನಡೆದರು.  ಈ ವೇಳೆ ಮಾತನಾಡಿದ ಪ್ರತಾಪಗೌಡ, ಸೋಲು ಗೆಲುವು ಏನೆ ಆಗಲಿ ಅದರ ಹೊಣೆ ನಾನೆ ಹೊರುತ್ತೇನೆ.

ಕ್ಷೇತ್ರದ ಜನತೆಗೆ ಅಭಿವೃದ್ಧಿ ಬೇಕಾಗಿಲ್ಲ. ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ಮತದಾರರು ಕೈ ಹಿಡಿದಿಲ್ಲ. ನಮ್ಮವರೇ ನಮ್ಮ ಕೈ ಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಸ್ಥಾನಮಾನ ನೀಡುವ ವಿಚಾರ ಪಕ್ಷ ನಿರ್ಧರಿಸಲಿದೆ ಎಂದರು.

ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ. ಆದ್ರೆ ಜನ ಹೊಸಬರನ್ನು ಬಯಸಿದ್ದಾರೆ. ಜನ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ಮತ ಹಾಕಿದ್ದಾರೆ ಎಂದು ಪ್ರತಾಪ್ ಗೌಡ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next