Advertisement

ಊಹಾಪೋಹಗಳ ನಡುವೆ ಖಟ್ಟರ್‌ ಜೊತೆ ವೇದಿಕೆ ಹಂಚಿಕೊಂಡ ಪ್ರಣಬ್‌

01:03 PM Sep 03, 2018 | Team Udayavani |

ನವದೆಹಲಿ: ಹರ್ಯಾಣದ ಗುರುಗ್ರಾಮದಲ್ಲಿ ಸ್ಮಾರ್ಟ್‌ ಗ್ರಾಮ್‌ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ಯೋಜನೆ ಗಳನ್ನು ಭಾನುವಾರ ಹರ್ಯಾಣ ಸಿಎಂ ಮನೋಹರ ಲಾಲ್‌ ಖಟ್ಟರ್‌ ಜೊತೆಗೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಉದ್ಘಾಟನೆ ಮಾಡಿದ್ದಾರೆ. ಆರೆಸ್ಸೆಸ್‌ ಜೊತೆಗೆ ಪ್ರಣಬ್‌ ಕೈ ಜೋಡಿಸಿದ್ದಾರೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಕಿರುವ ಮಧ್ಯೆಯೇ ಈ ಕಾರ್ಯಕ್ರಮ ನಡೆದಿದೆ.

Advertisement

ಪ್ರಣಬ್‌ ರಾಷ್ಟ್ರಪತಿಯಾಗಿದ್ದಾಗ ಸ್ಮಾರ್ಟ್‌ಗ್ರಾಮ್‌ ಯೋಜನೆ ಅಡಿಯಲ್ಲಿ ಹರ್ಯಾಣದ ಐದು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದ್ದರು. ಈ ಪೈಕಿ ಹಲವು ಯೋಜನೆಗಳು ಪೂರ್ಣ
ಗೊಂಡಿದ್ದು, ಇದರ ಉದ್ಘಾಟನೆ ಮಾಡಲಾಗಿದೆ. ಪ್ರಣಬ್‌ ಮುಖರ್ಜಿ ಫೌಂಡೇಶನ್‌ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವು ಆರೆಸ್ಸೆಸ್‌ ಕಾರ್ಯ ಕರ್ತರನ್ನು ಆಹ್ವಾನಿಸಲಾಗಿದೆ ಎಂದೂ ಹೇಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next