Advertisement

ಏರಿಂಡಿಯಾ ಖಾಸಗೀಕರಣ ಪ್ರಸ್ತಾಪ ತಿರಸ್ಕರಿಸಿದ್ದ ಪ್ರಣಬ್‌

03:45 AM Feb 20, 2017 | Team Udayavani |

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್‌ ಇಂಡಿಯಾ ಸಂಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸುವ ಬಗ್ಗೆ ಯುಪಿಎ ಸರ್ಕಾರ ಯೋಜಿಸಿತ್ತು. ಆದರೆ ಉನ್ನತಾಧಿಕಾರದ ಸಚಿವರ ಸಭೆಯಲ್ಲಿ ಈ ಪ್ರಸ್ತಾಪ ಚರ್ಚೆಗೆ ಬಂದಾಗ ಸಮಿತಿ ಸದಸ್ಯರಾಗಿದ್ದ ಹೆಚ್ಚಿನ ಸಚಿವರು ಖಾಸಗಿಯವರಿಗೆ ವಹಿಸಲು ಒಲವು ವ್ಯಕ್ತಪಡಿಸಿದ್ದರು.

Advertisement

ಆದರೆ ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್‌  ಅದನ್ನು ವಿರೋಧಿಸಿದ್ದರು. ಹಿರಿಯ ಅಧಿಕಾರಿಗಳು ಸೂಚಿಸಿದ್ದ ಶಿಫಾರಸುಗಳನ್ನು ಸಮಿತಿ ಒಪ್ಪಿಕೊಳ್ಳಲು ಮುಂದಾಗಿತ್ತು. ಮುಖರ್ಜಿ ಅವರು ಖಾಸಗೀಕರಣ ಬಿಟ್ಟು ಉಳಿದೆಲ್ಲ ಶಿಫಾರಸುಗಳ ಜಾರಿಗೆ ಒಪ್ಪಿದ್ದರು. ಸಂಸ್ಥೆಯನ್ನು ಖಾಸಗೀಕರಣ ಮಾಡುವುದು ಹಾಗೂ ಮುಚ್ಚುವುದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಿದ್ದರು. 

ಈ ಕುರಿತು ಮಾಹಿತಿ ಹಕ್ಕಿನಡಿ ವಿವರ ಸಂಗ್ರಹಿಸಿರುವುದಾಗಿ “ದಿ ಹಿಂದೂ’ ಹೇಳಿಕೊಂಡಿದೆ. ಹೀಗಾಗಿ ಅದನ್ನು ಕೈಬಿಡಲಾಯಿತು. ಸಚಿವರಾಗಿದ್ದ ಜೈಪಾಲ್‌ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದರೆ, ಸಚಿವರಾಗಿದ್ದ ಅಜಿತ್‌ ಸಿಂಗ್‌, ಚಿದಂಬರಂ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next