Advertisement

ದೆಹಲಿ ಗಣದಲ್ಲಿ ಎನ್‌ಸಿಸಿ ತಂಡ ಮುನ್ನಡೆಸುವ ಮೈಸೂರಿನ ಯುವತಿ

12:11 PM Jan 25, 2022 | Team Udayavani |

ಮೈಸೂರು: ದೆಹಲಿಯಲ್ಲಿ ಬುಧವಾರ ನಡೆಯುವ 73ನೇ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ರಾಜ್ಯದಿಂದ ಪ್ರತಿನಿಧಿಸುತ್ತಿರುವ ಎನ್‌ಸಿಸಿ ತಂಡವನ್ನುಮುನ್ನಡೆಸುವ ಸೌಭಾಗ್ಯ ಮೈಸೂರಿನ ವಿದ್ಯಾರ್ಥಿನಿಗೆ ಒಲಿದು ಬಂದಿದೆ.

Advertisement

ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್‌ ಎನ್‌ಸಿಸಿ ತಂಡದ ನೇತೃತ್ವ ವಹಿಸಲಿದ್ದಾರೆ. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್‌ ಸಿಂಗ್‌ ಮತ್ತು

ಪುಷ್ಪಾ ಕುವರ್‌ ದಂಪತಿಯ ಪುತ್ರಿಯಾಗಿರುವ ಈಕೆ, ಎನ್‌ಸಿಸಿ ಸೀನಿಯರ್‌ ಅಂಡರ್‌ ಆಫೀಸರ್‌ ಆಗಿದ್ದಾರೆ. ಪ್ರಮೀಳಾ ಅವರ ತಂದೆ ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್‌ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಎನ್‌ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕ ರಲ್ಲಿ ಸಂತಸವನ್ನುಂಟು ಮಾಡಿದೆ.

ಪ್ರಮಿಳಾ ಜೊತೆಗೆ ಮಹಾರಾಣಿ ಕಲಾ ಕಾಲೇಜಿನ ಸುವರ್ಷ ಸೇರಿ ಮೈಸೂರಿ  ನಿಂದ ಆರು ವಿದ್ಯಾರ್ಥಿಗಳು ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next