Advertisement

‘ಮಠ ಬಿಟ್ಟು ರಾಜಕೀಯಕ್ಕೆ ಬನ್ನಿ..’: ದಿಂಗಾಲೇಶ್ವರ ಶ್ರೀ ವಿರುದ್ದ ಜೋಶಿ ಅಭಿಮಾನಿಗಳ ಪೋಸ್ಟ್

12:16 PM Apr 08, 2024 | Team Udayavani |

ಹುಬ್ಬಳ್ಳಿ: ರಾಜಕೀಯ ಮಾಡುವುದಾದರೆ ಮಠ ಬಿಟ್ಟು ನೇರವಾಗಿ ರಾಜಕೀಯಕ್ಕೆ‌ ಬನ್ನಿ ಒಂದು ಸಾವಿರ ಮತ ಪಡೆಯುವ ಯೋಗ್ಯತೆ ಇಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಪ್ರಹ್ಲಾದ ಜೋಶಿ ಬ್ರಿಗೇಡ್ ಹೆಸರಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಸಂಚಲನ ಮೂಡಿಸಿದೆ.

Advertisement

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಪ್ರಹ್ಲಾದಗ ಜೋಶಿ ಅಭಿಮಾನಿಗಳು ಸ್ವಾಮೀಜಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸನಾತನ ಧರ್ಮದ ಮೇಲೆ ನಂಬಿಕೆ ಇದ್ದರೆ ಇಂತಹ ಚೀಟಿಂಗ್ ರಾಜಕೀಯ ಮಾಡಬೇಡಿ. ರಾಜಕೀಯಕ್ಕೆ ಬರುವುದಾದರೆ ಖಾವಿ ತೊರೆದು ನೇರವಾಗಿ ರಾಜಕೀಯಕ್ಕೆ ಬನ್ನಿ. ಲಿಂಗಾಯತರಿಗೆ ಅನ್ಯಾಯವೆಂಬ ನಿಮ್ಮಹೇಳಿಕೆ ನಾಚಿಕೆಗೇಡು, ನೇರ ರಾಜಕೀಯಕ್ಕೆ ಬಂದರೆ ಬ್ರಾಹ್ಮಣ ಸಮಾಜ, ಎಸ್ಎಸ್ ಕೆ ಹಾಗೂ ಎಸ್ ಸಿ,ಎಸ್ ಸ್ಟಿ ಸಮಾಜ ನಿಮಗೆ ಬುದ್ದಿ‌ಕಲಿಸಲಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಈ ಹಿಂದೆ ಮೂರು ಸಾವಿರ ಮಠದ ವಿಚಾರದಲ್ಲು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ. ಹಣದ ಆಸೆಗಾಗಿ ಡಬಲ್ ಗೇಮ್ ರಾಜಕೀಯ ಮಾಡುವುದನ್ನು ಬಿಡಿ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next