Advertisement

ಬೆಂಗಳೂರು ಸೆಂಟ್ರಲ್‌ ನಿಂದ ಪ್ರಕಾಶ್‌ ರೈ ಸ್ಪರ್ಧೆ

08:01 AM Mar 22, 2019 | Team Udayavani |

ಬೆಂಗಳೂರು: ‘ಜಸ್ಟ್‌ ಆಸ್ಕಿಂಗ್‌’ ಅಭಿಯಾನದ ಮೂಲಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಟೀಕಿಸುತ್ತಿದ್ದ ಬಹುಭಾಷಾ ನಟ ಕನ್ನಡಿಗ ಪ್ರಕಾಶ್‌ ರೈ ಅವರು ಈ ಬಾರಿ ಸಂಸತ್‌ ಪ್ರವೇಶಿಸಲು ಸಿದ್ಧತೆಯನ್ನು ನಡೆಸಿದ್ದಾರೆ. ಬೆಂಗಳೂರಿನ ಸೆಂಟ್ರಲ್‌ ಕ್ಷೇತ್ರದಿಂದ ಸಂಸತ್‌ ಗೆ ಆಯ್ಕೆಯನ್ನು ಬಯಸಿ ನಟ ಪ್ರಕಾಶ್‌ ರೈ ಅವರು ಶುಕ್ರವಾರದಂದು ತಮ್ಮ ನಾಮಪತ್ರವನ್ನು ಸಲ್ಲಿಸಿದರು.

Advertisement

ಆಸ್ಟಿನ್‌ ಟೌನ್‌ ನಲ್ಲಿರುವ ನಂದ ಕ್ರಿಡಾಂಗಣದಿಂದ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಮೆರವಣಿಗೆಯಲ್ಲಿ ಹೊರಟ ಪ್ರಕಾಶ್‌ ರೈ ಅವರು ಬಳಿಕ ರಿಚ್ಮಂಡ್‌ ವೃತ್ತದ ಮೂಲಕ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next