Advertisement

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

07:14 PM May 03, 2024 | Team Udayavani |

ಸಿಂಧನೂರು: ತನಿಖಾ ಸಂಸ್ಥೆಯನ್ನು ಸ್ಥಾಪನೆ‌ ಮಾಡಿಕೊಂಡಿರುವ ಸರಕಾರ ಯಾವ ದಿಕ್ಕಿನಲ್ಲಿ‌ ಹೊರಟಿದೆ.  ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ‌ ನಡೆಸುತ್ತಿರುವ ಎಸ್ಐಟಿ‌ ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

Advertisement

ಮಾಜಿ ಸಚಿವ ವೆಂಕಟರಾವ್ ನಾಡಗೌಡ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 400 ಮಹಿಳೆಯರ‌ ಮೇಲೆ ಅತ್ಯಾಚಾರ ಆಗಿದೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ. ಖರ್ಗೆ ಬದಲು ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ ಅವರೇ ಈ ಮಾಹಿತಿ‌ ಕೊಟ್ಟಿರಬೇಕು. ಇಲ್ಲವೇ ಟೆಂಟ್ ಗಳಲ್ಲಿ ಅಶ್ಲೀಲ ಸಿನಿಮಾ ತೋರಿಸಿ‌ ಮೇಲೆ‌ ಬಂದ‌ ಮಹಾನಾಯಕ ಇದನ್ನು ಹೇಳಿರಬೇಕು ಎಂದು ಪರೋಕ್ಷ ಟಾಂಗ್ ನೀಡಿ ಆಕ್ರೋಶ ಹೊರ ಹಾಕಿದರು.

ತನಿಖಾ ಸಂಸ್ಥೆಯನ್ನು ರಚನೆ ಮಾಡಿರುವ ಸರಕಾರ, ರಾಹುಲ್‌ ಗಾಂಧಿಗೆ ನೋಟಿಸ್ ಕೊಟ್ಟು ಅವರ ಬಳಿ ಇರಬಹುದಾದ 400 ಪ್ರಕರಣಗಳ ಮಾಹಿತಿ ಸಂಗ್ರಹಿಸಬೇಕು ಎಂದರು. ಮಾಜಿ ಸಚಿವ ನಾಡಗೌಡ, ಮಾಜಿ ಶಾಸಕ ವೆಂಕಟಪ್ಪ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next