Advertisement

ಮೂಡುಬಿದಿರೆಯ ಪ್ರಹ್ಲಾದ ಪ್ರಧಾನಿ ಜತೆ ಸಂವಾದಕ್ಕೆ ಆಯ್ಕೆ

12:48 AM Jan 22, 2023 | Team Udayavani |

ಮೂಡುಬಿದಿರೆ: ಹೊಸದಿಲ್ಲಿಯಲ್ಲಿ ಜ. 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ಮತ್ತು ಜ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ “ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಕಡಂದಲೆ ಆಯ್ಕೆಯಾಗಿದ್ದಾರೆ.

Advertisement

ಜನವರಿ ಮೊದಲ ವಾರ ನಡೆದ ರಾಷ್ಟ್ರ ಮಟ್ಟದ ಕಲಾ ಉತ್ಸವದ ನಾಟಕ (ವೈಯಕ್ತಿಕ) ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದರು. ಅವರು ಕಡಂದಲೆಯ ಸ್ಕಂದ ಪ್ರಸಾದ್‌ ಭಟ್‌- ರಾಜಲಕ್ಷ್ಮೀ ಎಂ.ಕೆ. ಅವರ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next