Advertisement

ಪಾಲಿಕೆ ಪಕ್ಷೇತರ ಸದಸ್ಯ ಪ್ರಭಂಜನ್‌ ಕಾಂಗ್ರೆಸ್‌ ಸೇರ್ಪಡೆ

07:06 PM Oct 04, 2021 | Team Udayavani |

 ಬಳ್ಳಾರಿ: ಮಹಾನಗರ ಪಾಲಿಕೆ ಮೂರನೇ ವಾರ್ಡ್‌ ಸದಸ್ಯ ಮುಂಡೂರು ಪ್ರಭಂಜನ್‌ ಕುಮಾರ್‌ ಅವರು ಈಚೆಗೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಪಾಲಿಕೆ ಮೇಯರ್‌-ಉಪಮೇಯರ್‌ ಆಯ್ಕೆಗೆ ಸಂಬಂ ಧಿಸಿದಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಈಚೆಗೆ ನಡೆದ ಪಾಲಿಕೆ ಸದಸ್ಯರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಮ್ಮುಖದಲ್ಲಿ ಪ್ರಭಂಜನ್‌ ಕುಮಾರ್‌ ಅವರು ಕಾಂಗ್ರೆಸ್‌ ಸೇರಿದ್ದಾರೆ.

Advertisement

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಾಲಿಕೆ ಸದಸ್ಯ ಪ್ರಭಂಜನ್‌ ಅವರು ಮೂಲತಃ ಕಾಂಗ್ರೆಸ್‌ ನವರೇ ಪಕ್ಷೇತರರಾಗಿ ಗೆದ್ದರೂ ಅವರು ನಮ್ಮವರೇ. ಪಾಲಿಕೆಯಲ್ಲಿ ಪಕ್ಷದ ಇತರೆ ಸದಸ್ಯರಿಗೆ ಸಿಗುವ ಎಲ್ಲ ಅವಕಾಶಗಳನ್ನು ಇವರಿಗೂ ಕಲ್ಪಿಸಲಾಗುವುದು. ಪಕ್ಷದಲ್ಲೂ ಸೂಕ್ತ ಜವಾಬ್ದಾರಿಯನ್ನು ನೀಡಿ ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುವುದು ಎಂದು ಸೂಚಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಭಂಜನ್‌ ಅವರ ಕುಟುಂಬವೇ ಮೂಲ ಕಾಂಗ್ರೆಸ್‌. ಹಾಗಾಗಿ ಪ್ರಭಂಜನ್‌ ನಮ್ಮವರೇ. ಪ್ರಭಂಜನ್‌ ಕಾಂಗ್ರೆಸ್‌ ಸೇರಿರುವುದು ಒಳ್ಳೆಯ ಬೆಳವಣಿಗೆ. ಸಂಘಟನಾ ಚತುರತೆಯುಳ್ಳ ಪ್ರಭಂಜನ್‌ರಂಥ ಯುವಕರು ಸೇರುತ್ತಿರುವುದು ಬಳ್ಳಾರಿಯಲ್ಲಿ ಕಾಂಗ್ರೆಸ್‌ ಮತ್ತಷ್ಟು ಬಲವರ್ಧನೆಯಾಗಲು ಸಹಕಾರಿಯಾಗಲಿದೆ ಎಂದು ಆಶಿಸಿದರು. ಈ ವೇಳೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಪಾಲಿಕೆ ಸದಸ್ಯ ನೂರ್‌ ಮಹಮ್ಮದ್‌, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next