Advertisement

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗುಡಿಸಲು ಮನೆ‌ಸುಟ್ಟು ಭಸ್ಮ

01:27 PM Oct 13, 2021 | Team Udayavani |

ಚಿಂತಾಮಣಿ: ವಿದ್ಯುತ್ ಸರ್ಕ್ಯೂಟ್ ನಿಂದ‌ಗುಡಿಸಲು‌ಮನೆಯೊಂದು ಸುಟ್ಟು ಭಸ್ಮವಾಗಿ ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಆಗದಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ತಾಲೂಕಿನ‌ ಉಪ್ಪರಪೇಟೆ ಗ್ರಾಪಂ ವ್ಯಾಪ್ತಿಯ ಬಿಂಗಾನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಚನ್ನಪ್ಪ ಎಂಬುವರಿಗೆ ಸೇರಿದ್ದ ಗುಡಿಸಲು‌ಮನೆ ಬೆಂಕಿಗೆ ಆಹುತಿ ಆಗಿದ್ದು ಮಂಗಳವಾರ ರಾತ್ರಿ ೭ ಗಂಟೆ ಸಮಯದಲ್ಲಿ ವಿದ್ಯುತ್ ಸರ್ಕ್ಯೂಟ್ ತಗುಲಿದೆ ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ಆದ ತಕ್ಷಣ ಎಚ್ಚೆತುಕೊಂಡ ಮನೆಯವರು ಹೊರ‌ನಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ನಾರಾಯಣಸ್ವಾಮಿ ಕುಟುಂಬದವರು ಅದೆ‌ ಮನೆಯಲ್ಲಿ ಅಡುಗೆ ಮಾಡಿ ತಿಂದು ಬೆರೊಂದು‌ ಮನೆಯಲ್ಲಿ‌ ಮಲಗುತ್ತಿದ್ದರಿಂದ‌ಪ್ರಾಣಾಪಾಯದಿಂದ‌ತಪದೊಇಸಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸುತ್ತಾರೆ.

ಮನೆಯಲ್ಲಿದ್ದ ದವಸ ಧಾನ್ಯ ಗಳು, ಪಾತ್ರೆ ಸಾಮಾನುಗಳು ಸುಟ್ಟು ಭಸ್ಮವಾಗಿ ಸಾವಿರಾರು ರೂ ನಷ್ಟವಾಗಿದೆ ಎಂದು ನಾರಾಯಣಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ವಿಷಯ ತಿಳಿದ ಕೂಡಲೆ ಆಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next