Advertisement

ಆನೇಕಲ್: ಕಂಬ ಹತ್ತಿ ಕೆಲಸ ಮಾಡುವಾಗ ವಿದ್ಯುತ್ ಲೈನ್ ಚಾರ್ಜ್ ಆನ್; ಒಬ್ಬ ಲೈನ್ ಮ್ಯಾನ್ ಸಾವು

08:03 PM Mar 14, 2022 | Team Udayavani |

ಆನೇಕಲ್: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ನಡೆದಿದೆ.

Advertisement

ಪವನ್ ಮೃತ ಲೈನ್ ಮ್ಯಾನ್. ಮತ್ತೊಬ್ಬ ಲೈನ್ ಮೆನ್ ಮುರಳಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಸ್ಕಾಂ ಟ್ರಾನ್ಸ್ ಫಾರ್ಮರ್ ನಲ್ಲಿ ಸಮಸ್ಯೆ ಬಗೆಹರಿಸಲ  ಪವನ್ ಹಾಗೂ ಮುರಳಿ  ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಕಂಬ ಹತ್ತಿದ್ದಾರೆ. ಈ ವೇಳೆ ಕೆಲಸ ಮಾಡುತ್ತಿದ್ದಾಗ ಏಕಾಏಕಿನ ಅಧಿಕಾರಿಗಳು ವಿದ್ಯುತ್ ಲೈನ್ ಚಾರ್ಜ್ ಮಾಡಿದ್ದಾರೆ. ತಕ್ಷಣ ವಿದ್ಯುತ್ ಶಾಕ್ ಹೊಡೆದು ಕಂಬದ ಮೇಲಿಂದ ಇಬ್ಬರು ಲೈನ್ ಮ್ಯಾನ್ ಗಳು ಕೆಳಕ್ಕೆ ಬಿದ್ದಿದ್ದಾರೆ. ಇವರಲ್ಲಿ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪ್ರತಿಬಾರಿ ಅಮಾಯಕ ಲೈನ್ ಮ್ಯಾನ್ ಗಳು ಸಾವನ್ನಪ್ಪುತ್ತಿದ್ದರೂ ತಲೆಕೆಡಿಸಿಕೊಳ್ಳದ ಹಿರಿಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next