Advertisement

ಹೊಂಡಗುಂಡಿ ರಸ್ತೆ; ಆ್ಯಂಬುಲೆನ್ಸ್‌ನಲ್ಲಿ ವಿಚಿತ್ರ ಹೆರಿಗೆ !

11:44 AM Dec 03, 2021 | Team Udayavani |

ಉಡುಪಿ: ಮೃತ್ಯುಕೂಪ ದಂತಿರುವ ಹೊಂಡಗುಂಡಿಗಳಿರುವ ರಸ್ತೆಯಲ್ಲಿ ಸೈರನ್‌ ಮೊಳಗಿಸುತ್ತ, ನೀಲಿ ಲೈಟ್‌ ಬೆಳಗಿಸಿ ವಾಲಿಕೊಂಡು ಬರುತ್ತಿರುವ ಆ್ಯಂಬುಲೆನ್ಸ್‌ ನೋಡಲು ಜನರು ಏನಾಯಿತು ಎಂದು ಗಾಬರಿಗೊಳಗಾಗಿ, ರಸ್ತೆ ಉದ್ದಕ್ಕೂ ನಿಂತು ನೋಡುತ್ತಿದ್ದರು. ಅವರು ನೋಡುತ್ತಿದ್ದಂತೆಯೇ ಆ್ಯಂಬುಲೆನ್ಸ್‌ ನಡುರಸ್ತೆಯಲ್ಲಿ ನಿಂತಿತು!

Advertisement

ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್‌ ಮೇಸ್ತ ಶಿರೂರು ಅವರು ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಯನ್ನು ಆ್ಯಂಬುಲೆನ್ಸ್‌ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ ಗರ್ಭಿಣಿ ಮಹಿಳೆ ವಾಹನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು.

ಈ ಘಟನೆ ನಡೆದಿರುವುದು ಗುರುವಾರ ಗುಂಡಿಬೈಲಿನಿಂದ ಅಡ್ಕದಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ. ಆದರೆ ಇದು ನೈಜ ಘಟನೆಯಲ್ಲ; ಕೆಲವು ವರ್ಷಗಳಿಂದ ಹದಗೆಟ್ಟಿರುವ ರಸ್ತೆ ಪರಿಸ್ಥಿತಿ ಕುರಿತು ಆಡಳಿತ ವ್ಯವಸ್ಥೆಗಳ ಗಮನ ಸೆಳೆಯಲು ತಾಯಿ, ಮಗುವಿನ ಗೊಂಬೆ ಗಳನ್ನು ಬಳಸಿಕೊಂಡು ಮಾಡಿರುವ ಅಣುಕು ಪ್ರದರ್ಶನವಾಗಿತ್ತು! ಇಲ್ಲಿಯ ರಸ್ತೆಯಲ್ಲಿ ಹೊಂಡಗುಂಡಿಗಳು ಬಿದ್ದು ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವುದು ಸವಾಲಿನ ಕೆಲಸವಾಗಿದ್ದು ಶಾಲಾ ವಿದ್ಯಾರ್ಥಿಗಳು ನಡೆದಾಡಲು ಅಸಾಧ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿ ಗಳು ಶೀಘ್ರ ರಸ್ತೆ ಕಾಂಕ್ರೀಟ್‌ ಕಾಮಗಾರಿ ಆರಂಭಿಸುವಂತೆ ಸಮಾಜಸೇವಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next