Advertisement

Ayodhya ರಾಮಪಥದಲ್ಲಿ ಗುಂಡಿ: ತನಿಖೆಗೆ ಸಮಿತಿ ರಚನೆ

01:14 AM Jul 01, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮಪಥದ ಕಾಮಗಾರಿ ನಿರ್ಲಕ್ಷ್ಯ ಆರೋಪ ಸಂಬಂಧಿಸಿದಂತೆ ತನಿಖೆ ನಡೆಸಲು ಅಯೋಧ್ಯಾ ಜಿಲ್ಲಾಡಳಿತವು ಸಮಿತಿಯೊಂದನ್ನು ರಚಿಸಿದೆ. 15 ದಿನಗಳ ಒಳಗೆ ವರದಿ ಸಲ್ಲಿಸಲಿದೆ ಎಂದು ಅಯೋಧ್ಯಾ ವಿಭಾಗೀಯ ಆಯುಕ್ತ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಭಾರೀ ಮಳೆಯಾಗು ತ್ತಿದ್ದಂತೆ ರಾಮಪಥದ ರಸ್ತೆಗಳು ಗುಂಡಿ ಬಿದ್ದಿದ್ದವು. ಇದಕ್ಕೆ ರಸ್ತೆ ಕಾಮಗಾರಿ ವೇಳೆ ನಿರ್ಲಕ್ಷ್ಯ ವಹಿಸಿರುವುದೇ ಕಾರಣವೆಂದು 6 ಅಧಿಕಾರಿಗಳನ್ನು ಸರಕಾರ ಅಮಾನತುಗೊಳಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ರಸ್ತೆಯಲ್ಲಿ ನೀರು ತುಂಬುವ ಬಗ್ಗೆ ಹಾಗೂ ಕೊಳಚೆ ಚೇಂಬರ್‌, ಮ್ಯಾನ್‌ಹೋಲ್‌ಗ‌ಳಿಗೆ ಸಂಬಂಧಿಸಿದ ಸಮಸ್ಯೆ ಮತ್ತು ರಸ್ತೆ ಗುಂಡಿ ಬಿದ್ದಿರುವ ಬಗ್ಗೆ ಈ ಸಮಿತಿ ತನಿಖೆ ನಡೆಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next