Advertisement

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

12:32 PM Oct 17, 2021 | Team Udayavani |

ಶಿರಸಿ: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗಲೇ ಅಕಾಲಿಕವಾಗಿ‌ ಮೃತಪಟ್ಟ ಪ್ರೋ.ಎಂ.ಎ.ಹೆಗಡೆ ಅವರಿಗೆ ಮರಣೋತ್ತರವಾಗಿ ಚಂದುಬಾಬು‌ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

Advertisement

ಇಲ್ಲಿನ ಯಕ್ಷ ಸಂಭ್ರಮ ಸ್ಥಾಪಿಸಿದ ಪ್ರಸಿದ್ದ ತಾಳಮದ್ದಲೆ ದಿ. ಚಂದುಬಾಬು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ  ಟ್ರಸ್ಟನ ಅಧ್ಯಕ್ಷರೂ ಆಗಿದ್ದ ಬಹುಶೃತ ವಿದ್ವಾಂಸರಾಗಿದ್ದ ಪ್ರೊ. ಎಂ.ಎ.ಹೆಗಡೆ ಅವರಿಗೆ ಮರಣೋತ್ತರ‌ ನೀಡಲಾಗುತ್ತಿದೆ.

ಅ.24ರಿಂದ ಮಹಾಬಲ ಸಪ್ತಕ ಎಂಬ ತಾಳಮದ್ದಲೆ ಸರಣಿ ನಗರದ‌ ಟಿಎಂಎಸ್  ಸಭಾಂಗಣದಲ್ಲಿ ಪ್ರಾರಂಭವಾಗಲಿದೆ. ಅ.24ರ ಮಧ್ಯಾಹ್ನ 3:45 ಕ್ಕೆ‌ ಪ್ರಶಸ್ತಿ  ಪ್ರದಾನ‌ ಕೂಡ ಮಾಡಲಾಗುತ್ತಿದೆ. ಪ್ರಸಿದ್ದ ಆರ್ಥದಾರಿ ವಿ.ಉಮಾಕಾಂತ ಭಟ್ಟ‌ ಕೆರೇಕೈ ಅವರು ಹೆಗಡೆ ಅವರ ಸಂಸ್ಮರಣೆ‌ ಮಾಡಲಿದ್ದಾರೆ.

ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ‌ ಹುಳಗೋಳ,‌ ಟ್ರಸ್ಟ‌ನ ನೂತನ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಪಾಲ್ಗೊಳ್ಳಿದ್ದಾರೆ. ಸಂಘಟಕರ ಪವಾಗು ಸೀತಾರಾಮ ಚಂದು, ಎಂ.ವಿ.ಹೆಗಡೆ ಅಮಚಿಮನೆ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next