Advertisement

ಅವಹೇಳನಕಾರಿ ಪೋಸ್ಟ್‌ : ದೂರು

05:31 PM Oct 06, 2022 | Team Udayavani |

ಕುಣಿಗಲ್‌: ವ್ಯಶ್ಯೆಯನ್ನು ದುರ್ಗಾ ಮಾತೆ ಮಾಡಿದ ಬ್ರಾಹ್ಮಣ್ಯರು ಎಂದು ಸಾಮಾಜಿಕ ಜಾಲತಾಣ (ಫೇಸ್‌ ಬುಕ್‌)ನಲ್ಲಿ ಹರಿ ಬಿಟ್ಟಿರುವ ವ್ಯಕ್ತಿ ವಿರುದ್ಧ ಬಜರಂಗದಳದ ಮುಖಂಡರು ದೂರು ನೀಡಿದ ಹಿನ್ನಲೆಯಲ್ಲಿ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ತಾಲೂಕಿನ ಹುತ್ರಿದುರ್ಗ ಹೋಬಳಿ ಆಲ್ಕೆರೆ ಗ್ರಾಮದ ನಂಜಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ಏನಿದು ಪ್ರಕರಣ: ಆಲ್ಕೆರೆ ನಂಜಪ್ಪ ಡಿಎಂಎಸ್‌ ಎಂಬ ಫೇಸ್‌ಬುಕ್‌ ಅಕೌಂಟ್‌ ಖಾತೆಯಲ್ಲಿ ದೇಶಾದ್ಯಂತ ಹಿಂದು ಧರ್ಮಿಯರು ಪೂಜಿಸುವ ದುರ್ಗಾ ದೇವಿಯನ್ನ ವೇಶ್ಯೆ ಎಂಬುದಾಗಿ ವರ್ಣಿಸಿ, ನಿಂದಿಸಿ ಪೋಸ್ಟ್‌ ಮಾಡಿದ್ದು, ಹಿಂದೂ ಧರ್ಮಿಯರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಆಲ್ಕೆರೆ ನಂಜಪ್ಪ ಡಿಎಂಎಸ್‌ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಬಜರಂಗದಳದ ಮುಖಂಡ ಎಸ್‌. ಎಲ್‌.ಗಿರೀಶ್‌, ಈಗ ನವರಾತ್ರಿಯಲ್ಲಿ ದುರ್ಗಾ ಮಾತೆಯನ್ನು ಎಲ್ಲರೂ ಪೂಜಿಸುವ ಸಂದರ್ಭದಲ್ಲಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಹಾಗೂ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ರೀತಿಯಲ್ಲಿ ನಿಂಧನಾತ್ಮಕವಾಗಿ ಪ್ರಸಾರ ಮಾಡಿದ್ದು, ಇದರಿಂದ ಭಾರತದಾದ್ಯಂತ ಗಲಾಟೆಗಳು ನಡೆಯುವ ಸಾಧ್ಯತೆಯಿದೆ. ಹಿಂದು ದೇವರುಗಳನ್ನು ಅಪಹಾಸ್ಯ ಮಾಡುವುದು ತುಂಬ ಸುಲಭವಾಗಿದೆ ಎಂದು ಭಾವಿಸಿ ಫೋಸ್ಟ್‌ ಮಾಡಿದ್ದಾರೆ. ಇದರಿಂದ ಹಿಂದುಗಳ ಧಾರ್ಮಿಕ ನಂಬಿಕೆಗೆ ನೋವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ನಂಜಪ್ಪ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳದ ಮುಖಂಡ ನೀಡಿರುವ ದೂರಿನ ಅನ್ವಯ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next