Advertisement

ಕೆಆರ್‌ಎಸ್ ಬೃಂದಾವನದಲ್ಲಿ ಮತ್ತೆ ಚಿರತೆಯೊಂದಿಗೆ ಮುಳ್ಳುಹಂದಿಯೂ ಪ್ರತ್ಯಕ್ಷ !

08:05 PM Nov 19, 2022 | Team Udayavani |

ಮಂಡ್ಯ: ವಿಶ್ವ ಪ್ರಸಿದ್ಧ ಕೆಆರ್‌ಎಸ್ ಅಣೆಕಟ್ಟೆ ಮತ್ತು ಬೃಂದಾವನ ಉದ್ಯಾನವನದಲ್ಲಿ ಮತ್ತೆ ಚಿರತೆಯೊಂದಿಗೆ ಮುಳ್ಳುಹಂದಿ ಕಾಣಿಸಿಕೊಂಡಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ.

Advertisement

ಶುಕ್ರವಾರ ರಾತ್ರಿ ಅಣೆಕಟ್ಟಿನ ನಾರ್ಥ್ ಗೇಟ್‌ನ ಉದ್ಯಾನದ ಬಳಿ ಚಿರತೆ ಹಾಗೂ ಮುಳ್ಳುಹಂದಿ ಕಾಣಿಸಿಕೊಳ್ಳುವ ಜೊತೆಗೆ ಒಂದಕ್ಕೊಂದು ಜಗಳವಾಡಿರುವ ದೃಷ್ಯ ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅ. 22 ರಂದು ಕಾಣಿಸಿಕೊಂದ್ದ ಚಿರತೆ ಮೊದಲು ಮತ್ತೆ ಅಣೆಕಟ್ಟಿನ ಉತ್ತರ ಭಾಗದಲ್ಲಿ ಮತ್ತು ದಕ್ಷಿಣ ಪ್ರವೇಶದ್ವಾರದಲ್ಲಿ ಮರ‍್ನಾಲ್ಕು ಬಾರಿ ಕಾಣಿಸಿಕೊಂಡಿತ್ತು. ಚಿರತೆ ಸೆರೆಗಾಗಿ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ಅರಣ್ಯ ಇಲಾಖೆಯ ಅಧಿಕಾರಿಗಳು 9 ಬೋನುಗಳನ್ನು ಇರಿಸಿದ್ದರು.
ಇವುಗಳ ಪೈಕಿ ಅಣೆಕಟ್ಟೆಯ ನಾರ್ಥ್ ಗೇಟ್‌ನ ಉದ್ಯಾನದ ಬಳಿಯಿಂದ ಇರಿಸಲಾಗಿದ್ದ, 1 ಬೋನನ್ನು ಶುಕ್ರವಾರ ಬೆಳಗ್ಗೆ ಪಾಂಡವಪುರ ಅರಣ್ಯ ಇಲಾಖೆ ಅಧಿಕಾರಿಗಳು ನಿಗಮದ ಅಧಿಕಾರಿಗಳು ವಿರೋಧದ ನಡುವೆಯೂ ಸ್ಥಳಾಂತರಿಸಿದ್ದಾರೆ. ಕಾಕತಾಳೀಯ ಎಂಬಂತೆ ಸ್ಥಳಾಂತರಿಸಿದ ದಿನದಂದೇ ಅದೇ ಸ್ಥಳದಲ್ಲಿ ಚಿರತೆ ಹಾಗೂ ಮುಳ್ಳುಹಂದಿ ಪ್ರತ್ಯಕ್ಷವಾಗಿರುವುದು ನಿಗಮದ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next