Advertisement

ಪುದುಚೇರಿ: ಡೆಂಗಿ ವಿರೋಧಿ ರಾಲಿಯಲ್ಲಿ ಕಿರಣ್‌ ಬೇಡಿ

12:09 PM Oct 07, 2017 | Team Udayavani |

ಪುದುಚೇರಿ : ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅವರಿಂದು ಡೆಂಗಿ ಕಾಯಿಲೆಯ ಬಗ್ಗೆ ಜನಜಾಗೃತಿ ಮೂಡಿಸುವ ರಾಲಿಯಲ್ಲಿ  ಭಾಗಿಯಾಗಿ ಜನರು ಡೆಂಗಿ ಕಾಯಿಲೆಯಿಂದ ದೂರವಿರಲು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳನ್ನು ಮನದಟ್ಟು ಮಾಡಿದರು. 

Advertisement

ಡೆಂಗಿ  ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಜನರು ತಮ್ಮ ವಾಸ ಸ್ಥಳದ ಆಸುಪಾಸಿನಲ್ಲಿ ಸೊಳ್ಳೆ ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕು; ಸ್ವಚ್ಚತೆಯನ್ನು ಕಾಪಾಡಬೇಕು ಎಂಬ ಘೋಷಣಾ ಫ‌ಲಕಗಳನ್ನು ಬೇಡಿ ಅವರು ಸ್ವತಃ  ಕೈಯಲ್ಲಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು. 

ಆನೇಕ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಈ ರಾಲಿಯಲ್ಲಿ ಭಾಗವಹಿಸಿದರು. ರಾಜ್ಯಪಾಲರ ಅಧಿಕೃತ ನಿವಾಸ “ರಾಜ್‌ ನಿವಾಸ್‌’ದಿಂದ ಬೆಳಗ್ಗೆ 6.15ಕ್ಕೆ ಹೊರಟ ರಾಲಿ, ಪುದುಚೇರಿಯ ಅನೇಕ ಮುಖ್ಯ ರಸ್ತೆಗಳ ಮೂಲಕ ಸಾಗಿತು. 

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗಿ ಕಾಯಿಲೆಯು ಶೇ.700ರಷ್ಟು ಹೆಚ್ಚಿಳವಾಗಿದೆ ಎಂದು ಬೇಡಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next