Advertisement

ಗಂಗೆಯಲ್ಲಿ ಮಿಂದೇಳಲು ಸಾಧುಗಳೇ ಹಿಂದೇಟು

06:00 AM Oct 02, 2017 | Team Udayavani |

ಮುಜಾಫ‌ರ್‌ನಗರ: ಗಂಗೆಯ ಒಂದು ಹನಿ ನೀರು ತಾಕಿದರೂ ಏಳೇಳು ಜನ್ಮ ಪಾವನವಾಗುತ್ತದೆ ಎಂಬುದು ನಮ್ಮ ಜನರ, ದೇಶದ ಪರಂಪರಾಗತ ನಂಬಿಕೆ. ಆದರೆ ಈಗ? ಗಂಗೆಯಲ್ಲಿ ಜನರು ಇರಲಿ, ದೇಶದ ಸಾಧು- ಸಂತರೇ ಮುಳುಗೇಳಲು ಹಿಂದೇ ಟು ಹಾಕಿರುವ ಘಟನೆ ವರದಿಯಾಗಿದೆ.

Advertisement

ವಿಜಯದಶಮಿ ಅಂಗವಾಗಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಲು ಸಾಧು ಸಂತರೇ ನಿರಾಕರಿಸಿರುವ ಘಟನೆ ಮುಜಾಫ‌ರ ನಗರದಲ್ಲಿ ನಡೆದಿದೆ. ನೀರು ತುಂಬ ಮಲಿನವಾಗಿರುವ ಕಾರಣ ನೀರಿಗೆ ಇಳಿಯುವುದಿಲ್ಲ ಎಂದು ಸಾಧು ಸಂತರು ಜಳಕವನ್ನೇ ಕೈಬಿಟ್ಟಿದ್ದಾರೆ.

ಇಲ್ಲಿನ ಸುಕೀರ್ತಲ್‌ ಬಳಿಯ ಗಂಗಾನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಪಕ್ಕದ ಕಾರ್ಖಾನೆಗಳ ಮಲಿನ ನೀರು ನದಿಯ ನೀರನ್ನು ಸೇರಿ, ಅದು ಸಂಪೂರ್ಣ ಮಲಿನವಾಗಿದೆ. ಇಂತಹ ನೀರಿನಲ್ಲಿ ಸ್ನಾನ ಮಾಡುವುದಿಲ್ಲ ಎಂದು ಸಾಧುಗಳು ಹೇಳಿದ್ದಾರೆ. ಸಾಧುಗಳ ಈ ಸಣ್ಣ ಮಟ್ಟಿನ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೀರಿನ ಮಾದರಿಯನ್ನು ಸಂಗ್ರಹ ಮಾಡಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ. 

“ಗಂಗೆಯ ಒಂದು ಹನಿ ನೀರೂ ಇಲ್ಲಿಯ ವರೆಗೆ ಶುದ್ಧೀಕರಣಗೊಂಡಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಸಮಾ ಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇಂತ ಹುದೊಂದು ಘಟನೆ ನಡೆದಿದೆ. ನಮಾಮಿ ಗಂಗೆ ಯೋಜನೆಯಡಿ ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರ್ಕಾರ ಮುಂದಾ ಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next