Advertisement

Politics: ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌,ಅರ್ಜುನ್‌ ಮುಂಡಾಗೆ ಹೆಚ್ಚುವರಿ ಖಾತೆ

01:11 AM Dec 08, 2023 | Team Udayavani |

ಹೊಸದಿಲ್ಲಿ: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಕೇಂದ್ರ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರು ಹೊಂದಿದ್ದ ಖಾತೆಗಳನ್ನು ಸಂಪುಟದ ಇತರ ಸದಸ್ಯರಿಗೆ ಮರು ಹಂಚಿಕೆ ಮಾಡಲಾಗಿದೆ. ಈ ಪೈಕಿ ಶೋಭಾ ಕರಂದ್ಲಾಜೆ ಮತ್ತು ರಾಜೀವ್‌ ಚಂದ್ರಶೇಖರ್‌ ಅವರಿಗೆ ಹೆಚ್ಚಿನ ಹೊಣೆ ಸಿಕ್ಕಿದೆ.

Advertisement

ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಂಸ್ಕರಣೆ ಖಾತೆ, ರಾಜೀವ್‌ ಚಂದ್ರಶೇಖರ್‌ ಅವರಿಗೆ ಹೆಚ್ಚುವರಿಯಾಗಿ ಜಲಶಕ್ತಿ ಖಾತೆಯನ್ನು ನೀಡಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವ
ರಾಗಿದ್ದ ನರೇಂದ್ರ ಸಿಂಗ್‌ ತೋಮರ್‌ ಅವರ ಖಾತೆಯನ್ನು ಅರ್ಜುನ್‌ ಮುಂಡಾ ಅವರಿಗೆ ನೀಡಲಾಗಿದೆ. ಡಾ| ಭಾರತಿ ಪ್ರವೀಣ್‌ ಪವಾರ್‌ ಅವರಿಗೆ ರೇಣುಕಾ ಸಿಂಗ್‌ ಸರುತಾ ಹೊಂದಿದ್ದ ಬುಡಕಟ್ಟು ವ್ಯವಹಾರಗಳ ಖಾತೆ ನೀಡಲಾಗಿದೆ. ಕೇಂದ್ರ ಸಂಪುಟದ ಶಿಫಾರಸಿನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಬದಲಾವಣೆಗಳಿಗೆ ಸಮ್ಮತಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next