Advertisement

ಜನರ ದುಡ್ಡಲ್ಲಿ ರಾಜಕಾರಣಿಗಳು ಮೆರೆಯುತ್ತಿದ್ದಾರೆ: ಉಪೇಂದ್ರ

09:55 AM Apr 03, 2019 | Team Udayavani |

ಭಾರತೀನಗರ/ಮೈಸೂರು: ಚುನಾವಣೆಯಲ್ಲಿ ಗೆಲುವು-ಸೋಲು ಮುಖ್ಯ ವಲ್ಲ. ಗೆಲುವು -ಸೋಲೇ ಮುಖ್ಯ ಎಂಬ ಜನರ ಮನಸ್ಥಿತಿ ಬದಲಾಯಿಸುವುದು ನಮ್ಮ ಪ್ರಯತ್ನ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ತಿಳಿಸಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಆಶಾರಾಣಿ ಪರ ಮಂಗಳವಾರ ಅವರು ಪ್ರಚಾರ ನಡೆಸಿದರು.

Advertisement

ವಾಸ್ತವವಾಗಿ ಮತದಾರರೇ ರಾಜರು. ಆದರೆ, ಜನರ ದುಡ್ಡಲ್ಲಿ ರಾಜಕಾರಣಿಗಳು ಮೆರೆಯುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವ ದೃಷ್ಟಿಯಿಂದ ಉತ್ತಮ ಪ್ರಜಾಕೀಯ ಪಾರ್ಟಿ ಸ್ಥಾಪಿಸಲಾಗಿದ್ದು, ಲೋಕ ಸಭಾ ಚುನಾ ವಣೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ 14 ಕ್ಷೇತ್ರಗಳಲ್ಲೂ ಪ್ರಜಾಕೀಯ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಾಗಿದೆ. ರಾಜ್ಯದ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, 2ನೇ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಏ.6 ಅಥವಾ 7ರಂದು ಬಿಡುಗಡೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next