Advertisement

ರಾಜಕೀಯ ದ್ವೇಷದ ಹಲ್ಲೆ: ದೂರು-ಪ್ರತಿದೂರು

09:47 PM May 14, 2023 | Team Udayavani |

ಸಿದ್ದಾಪುರ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ರಾಜಕೀಯ ದ್ವೇಶದ ಹಲ್ಲೆಯ ಪ್ರಥಮ ಪ್ರಕರಣ ಮೇ 13ರಂದು ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಶಂಕರನಾರಾಯಣ ಗ್ರಾಮದ ಕ್ರೋಡಬೈಲೂರು ಆಶ್ರಯ ಕಾಲನಿ ಬಳಿ ಸ್ನೇಹಿತರಾದ ಸಂತೋಷ ಪೂಜಾರಿ ಮತ್ತು ರಕ್ಷಿತ್‌ ಅವರು ನಿಂತುಕೊಂಡ ಸಂದರ್ಭ ಬಿಜೆಪಿ ಸಂಭ್ರಮದ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆಯಲ್ಲಿ ಸಾಗುತ್ತಿದ್ದ ರಂಜಿತ್‌ ಮೊಗವೀರ, ವಿಜೇತ್‌ ಮೊಗವೀರ ಹಾಗೂ ಅರುಣ ಅವರು ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದರು. ಅನಂತರ ಮನೆ ಕಡೆಗೆ ಹೋಗುತ್ತಿರುವಾಗ ಆರೋಪಿಗಳು ಮತ್ತೆ ಅಡ್ಡಗಟ್ಟಿ ದೊಣ್ಣೆ ಮತ್ತು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್‌ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿದೂರು: ಸ್ನೇಹಿತರಾದ ಅರುಣ, ರಂಜಿತ್‌ ಮತ್ತು ವಿಜೇತ್‌ ಅವರಿಗೆ ಸಂತೋಷ್‌ ಪೂಜಾರಿ ಮತ್ತು ರಕ್ಷಿತ್‌ ಪೂಜಾರಿ ಅವರು ಹಲ್ಲೆ ನಡೆಸಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಉಮೇಶ ಶೆಟ್ಟಿ ಕಲ್ಲುಗದ್ದೆ ಪ್ರತಿದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಎರಡೂ ಕಡೆಯ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next