Advertisement

ಬಾನೆಟ್‌ ಮೇಲೆ ಎಎಸ್‌ಐ ಎಳೆದೊಯ್ದ

12:58 AM May 03, 2020 | Sriram |

ಚಂಡೀಗಢ: ಕಾರನ್ನು ತಪಾಸಣೆ ನಿಟ್ಟಿನಲ್ಲಿ ನಿಲ್ಲಿಸುವಂತೆ ಹೇಳಿದ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಬಾನೆಟ್‌ ಮೇಲೆ ಎಳೆದೊಯ್ದ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಅನ್ಮೋಲ್‌ ಮೆಹ್ಮಿ (20) ಎಂಬಾತನನ್ನು ಬಂಧಿಸಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗಾಗಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮುಲ್ಕ್ ರಾಜ್‌ ನಿಲ್ಲಿಸಲು ಸೂಚಿಸಿದರು. ಇದರ ಹೊರತಾಗಿಯೂ ಮೆಹ್ಮಿ ಮುಂದಕ್ಕೆ ಚಲಿಸಿದಾಗ ವಾಹನ ಮುಂದೆ ಇದ್ದ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ ಮುಂದಕ್ಕೆ ಜಿಗಿದು, ಬಾನೆಟ್‌ ಮೇಲೆ ಬಿದ್ದರು. ಸ್ವಲ್ಪ ದೂರದವರೆಗೆ ಚಾಲಕ ಪೊಲೀಸ್‌ ಅಧಿಕಾರಿ ಸಹಿತ ಮುಂದೆ ಸಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಬಂಧಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next