Advertisement

ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಗೆ ತಹಶೀಲ್ದಾರ್, ಪೊಲೀಸರಿಂದ ಎಚ್ಚರಿಕೆ

11:14 AM Mar 27, 2020 | keerthan |

ಬಾಗಲಕೋಟೆ: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದ ಪ್ರಸಂಗ ಬಾದಾಮಿಯಲ್ಲಿ ಗುರುವಾರ ನಡೆದಿದೆ.

Advertisement

ಕೋಲ್ಕತ್ತದಿಂದ ಬಂದಿದ್ದ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಿ, 14 ದಿನ ಮನೆಯಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಈತ  ವೈದ್ಯರ ಸಲಹೆ ಮೀರಿ ಪಟ್ಟಣದಲ್ಲಿ ಓಡಾಡುತ್ತಿದ್ದ. ಹೋಮ್ ಕ್ಯಾರಂಟೈನ್ ನಲ್ಲಿರಬೇಕಾದ ವ್ಯಕ್ತಿಗೆ ಕೈಯಲ್ಲಿ ಸೀಲು ಹಾಕಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದರಿಂದ ಜನರಲ್ಲಿ ಆತಂಕ ಮೂಡಿಸಿತ್ತು.

ಅಷ್ಟೇ ಅಲ್ಲದೆ ಈತ ಹೋಮ್ ಕ್ಯಾರಂಟೈನ್ ನಲ್ಲಿ ಇರುವಂತೆ ಹೇಳಿದ ವೈದ್ಯರ ವಿರುದ್ದವೇ ಎತ್ತರದ ದನಿಯಲ್ಲಿ ಮಾತನಾಡಿದ್ದ ಎನ್ನಲಾಗಿದೆ.

ಇಂದು ಅಧಿಕಾರಿಗಳು ಆತನ ಮನೆ ತೆರಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ತಹಶೀಲ್ದಾರ್ ಸುಭಾಸ್ ಇಂಗಳೆ ನೇತೃತ್ವದಲ್ಲಿ ತೆರಳಿದ್ದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಠಾಣೆಗೆ ಕರೆತಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next