Advertisement

ಕುಷ್ಟಗಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ; 9 ಜನರು ವಶಕ್ಕೆ

04:20 PM Jan 16, 2022 | Team Udayavani |

ಕುಷ್ಟಗಿ: ತಾಲೂಕಿನ ಚಳಗೇರಾ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಬಳಿ ಇಸ್ಪೇಟ್ ಜೂಜಾಟ ನಿರತರ ಮೇಲೆ ಪಿಎಸೈ ತಿಮ್ಮಣ್ಣ ನಾಯಕ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆಸಿ,  9 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೂಜಾಟ ನಿರತರಿಂದ 84,650 ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

ಭಾನುವಾರ ಬೆಳಗಿನ ಜಾವ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಈ ಪ್ರಕರಣದಲ್ಲಿ 14 ಆರೊಪಿಗಳ ವಿರುದ್ದ ದೂರು ದಾಖಲಿಸಲಾಗಿದ್ದು, 9 ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ದಾಳಿಯಲ್ಲಿ ಪ್ರಕಾಶ ಗಾಣಗೇರ,ಪರಶುರಾಮ ನರಸಕೊಪ್ಪ, ಅಮರೇಶ ತಳವಗೇರಾ, ಮಹಾಂತೇಶ ತುರಾಯಿ, ಶಿವಕುಮಾರ ಹಿರೇಮಠ,ಮುರ್ತುಜಾಸಾಬ್ ಅತ್ತಾರ, ಸಂಗಮೇಶ ಮಾಲಿಪಾಟೀಲ, ಕಳಕಪ್ಪ ಗೊಂಗಡಶೆಟ್ಟರ್,ಲಕ್ಷ್ಮಣ ಗಾಡಗೋಳಿ, ರಮೇಶ ಬೋಗಿ,ಯಲ್ಲಪ್ಪ ಗುಡಗುಡಿ,ಶ್ರೀಕಾಂತ್ ನಾಲಗಾರ, ವೀರೇಶ ಅಂಗಡಿ,ಲಿಂಗರಾಜ ಸಣ್ಣಸಿದ್ದನಗೌಡ್ರು ವಿರುದ್ದ ದೂರು ದಾಖಲಿಸಲಾಗಿದೆ.

ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next