Advertisement

ಅಬಕಾರಿ ದಾಳಿ: ಸೇಂದಿ-ಸರಾಯಿ ವಶಕ್ಕೆ

01:15 PM Jul 27, 2022 | Team Udayavani |

ಶಹಾಬಾದ: ನಗರದ ವಿವಿಧೆಡೆ ಅಬಕಾರಿ ಪೊಲೀಸರು ದಾಳಿ ನಡೆಸಿ ಎಂಟು ಲೀಟರ್‌ ಕಳ್ಳಭಟ್ಟಿ ಸರಾಯಿ ಹಾಗೂ 40ಲೀಟರ್‌ ಬೆಲ್ಲದ ಕೊಳೆ, 30ಲೀಟರ್‌ ಕಲಬೆರಕೆ ಸೇಂದಿ ವಶಪಡಿಸಿಕೊಳ್ಳಲಾಗಿದೆ.

Advertisement

ಮಡ್ಡಿ ನಂ. 2ಏರಿಯಾದ ಶಹಾಬಾದದ ಮೂರು ಮನೆಗಳಲ್ಲಿ ಎಂಟು ಲೀಟರ್‌ ಕಳ್ಳಭಟ್ಟಿ ಸರಾಯಿ, 40 ಲೀಟರ್‌ ಬೆಲ್ಲದ ಕೊಳೆ ಹಾಗೂ ವಾಡಿ ಪಟ್ಟಣದ ವಿಜಯ ನಗರ ಏರಿಯಾದಲ್ಲಿ 30 ಲೀಟರ್‌ ಕಲಬೆರಕೆ ಸೇಂದಿಯನ್ನು ಮಾರಾಟಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ನೇತೃತ್ವದಲ್ಲಿ ನಾಲ್ಕು ಕಡೆ ಸಾಮೂಹಿಕ ಅಬಕಾರಿ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿತಳಾದ ಮಡ್ಡಿ ನಂ. 2 ಏರಿಯಾದ ಸಕ್ಕುಬಾಯಿ ರಮೇಶ ಚವ್ಹಾಣ ದಿವಳ ಎನ್ನುವಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಚಿತ್ತಾಪುರ ವಲಯದ ಅಬಕಾರಿ ಉಪ ನಿರೀಕ್ಷಕಿ ವಿಜಯಲಕ್ಷ್ಮೀ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡ್ಡಿ ನಂ. 2 ಏರಿಯಾದ ರೇಣುಕಾ ಅರ್ಜುನ ಚವ್ಹಾಣ ವಿರುದ್ಧ ಚಿತ್ತಾಪುರ ಅಬಕಾರಿ ನಿರೀಕ್ಷಕ ರಮೇಶ ಬಿರಾದಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುನೀತಾಬಾಯಿ ಚಂದ್ರಕಾಂತ ಚವ್ಹಾಣ, ವಾಡಿ ವಿಜಯನಗರದ ನಾಗಮ್ಮಾ ನಂದಕುಮಾರ ಬನಸುಡೆ ವಿರುದ್ಧ ಚಿತ್ತಾಪುರ ಉಪವಿಭಾಗದ ಅಬಕಾರಿ ನಿರೀಕ್ಷಕ ಶರಣಗೌಡ ಬಿರಾದಾರ ಪ್ರಕರಣ ದಾಖಲಿಕೊಂಡಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಾನಂದ, ಶರಣಬಸಪ್ಪ, ನಾಗರಾಜ ಹಾಗೂ ವಾಹನ ಚಾಲಕ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next