Advertisement

ನಿರ್ಗತಿಕರಿಗೆ ಊಟ ನೀಡಿ ಆರಕ್ಷಕರ ಮಾನವೀಯತೆ

12:51 PM Mar 25, 2020 | Suhan S |

ಬೆಂಗಳೂರು : ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಮೇಲು ಸೇತುವೆ ಹಾಗೂ ರಸ್ತೆ ಬದಿಯಲ್ಲಿ ಕುಳಿತಿದ್ದ ಭಿಕ್ಷುಕರು ಹಾಗೂ ನಿರ್ಗತಿಕರಿಗೆ ಪೊಲೀಸರು ಊಟ ಪೂರೈಸಿ ಮಾನವೀಯತೆ ಮೆರೆದರು.

Advertisement

ಚಾಮರಾಜಪೇಟೆ ಠಾಣೆ ಪೊಲೀಸರು ಹೊಯ್ಸಳ ವಾಹನದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಮೇಲು ಸೇತುವೆ ಕೆಳಗೆ ಕುಳಿತಿದ್ದ ನಿರ್ಗತಿಕರಿಗೆ ಊಟ ವಿತರಿಸಿದರು. ಹಾಗೆಯೇ ನಗರದ ಕೆಲ ವಿಭಾಗದ ಪೊಲೀಸರು ಭಿಕ್ಷಕರು ಮತ್ತು ನಿರಾಶ್ರಿತರಿಗೆ ಊಟದ ಪ್ಯಾಕೆಟ್‌ಗಳನ್ನು ವಿತರಿಸಿದರು. ಇನ್ನು ದಕ್ಷಿಣ ವಿಭಾಗದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದು, ಅಂಗಡಿ ಮಳಿಗೆಗಳು, ಹಾಲಿನ ಕೇಂದ್ರಗಳ ಮುಂಭಾಗ ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ಮೂರು ಅಡಿ ದೂರಕ್ಕೊಂದರಂತೆ ವೃತ್ತಕಾರ ಬರೆದು ಅಲ್ಲಿಯೇ ನಿಂತುಕೊಳ್ಳುವಂತೆ ಸೂಚಿಸಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next