Advertisement

ಸಿಡಿ ಪ್ರಕರಣ : ಸಂತ್ರಸ್ತೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ ಪೊಲೀಸರು

05:08 PM Mar 14, 2021 | Girisha |

ವಿಜಯಪುರ : ಕಳೆದ ಎರಡು ವಾರದಿಂದ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಅಶ್ಲೀಲ ‘ಸಿಡಿ’ ಪ್ರಕರಣಕ್ಕೆ ವಿಜಯಪುರ ನಂಟು ಬೆಸೆದಿದೆ. ಬಾಗಿಲು ಹಾಕಿದ ಮನೆಗೆ ಪೊಲೀಸರು ಅಂಟಿಸಿದ ನೋಟಿಸ್ ಪ್ರಕರಣದ ಸಂತ್ರಸ್ತೆ ವಿಜಯಪುರ ಜಿಲ್ಲೆಗೆ ಸೇರಿದವಳು ಎಂಬುದನ್ನು ಖಚಿತ ಪಡಿಸಿದೆ. ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಬಾಗಿಲು ಹಾಕಿದ ಮನೆಯೊಂದಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಅಂಟಿಸಿ, ವಿಚಾರಣೆಗೆ ಹಾಜರಾಗಿ ಎಂದು ಹೇಳಿದೆ.

Advertisement

ದಿನೇಶ ಕಲ್ಲಹಳ್ಳಿ ಮಾ.2 ರಂದು ನೀಡಿರುವ ದೂರಿನ ಕುರಿತು ತುರ್ತಾಗಿ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಈ ನೋಟಿಸ್ ತಲುಪಿದ, ನೋಡಿದ ತಕ್ಷಣ ವಿಚಾರಣೆಗೆ ಹಾಜರಾಗುವಂತೆ ಯುವತಿಯ ಹೆಸರು ಇರುವ ನೋಟಿಸನ್ನು ಬಾಗಿಲಿಗೆ ಅಂಟಿಸಲಾಗಿದೆ.

ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ ನಿರೀಕ್ಷಕ ಬಿ.ಮಾರುತಿ ಅವರನ್ನು ಮೊಬೈಲ್, ಇ-ಮೇಲ್ ಮೂಲಕ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಜೊತೆಗೆ ನಿಮ್ಮ ಮನವಿಯಂತೆ ಸೂಕ್ತ ರಕ್ಷಣೆ ನೀಡುವುದಾಗಿಯೂ ನೋಟಿಸ್ ನಲ್ಲಿ ಭರವಸೆ ನೀಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next