Advertisement

ಸಂಸದೆ ಸಾಧ್ವಿ ವಿರುದ್ಧ ದೂರು: ಉದ್ಯಮಿಗೆ‌ ನೇರವಾಗಿ ಬಂದು ದೂರು ನೀಡಲು ಪೊಲೀಸರಿಂದ ನೋಟಿಸ್

08:56 AM Dec 28, 2022 | Team Udayavani |

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಪ್ರಚೋದನಕಾರಿ ರೀತಿ ಮಾತಾನಾಡಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ದೂರು‌ ನೀಡಿದ್ದ ದೆಹಲಿಯಲ್ಲಿರುವ ಉದ್ಯಮಿಗೆ ಕೋಟೆ ಪೊಲೀಸರು ನೇರವಾಗಿ ಬಂದು ದೂರು ನೀಡಿ ಎಂದು ನೋಟಿಸ್ ಜಾರಿ ಮಾಡಿದ್ದಾರೆ.

Advertisement

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್  ಅವರು  ಲವ್​ ಜಿಹಾದ್​ನ ಬಗ್ಗೆ ಮಾತನಾಡುತ್ತಾ ಮನೆಯಲ್ಲಿರುವ ತರಕಾರಿ ಹೆಚ್ಚುವ ಚಾಕುವನ್ನು ಹೆಚ್ಚು ಚೂಪಾಗಿಟ್ಟಿರಿ ಎಂದು ಹೇಳಿಕೆ ನೀಡಿದ್ದರು. ಇದು ಪ್ರಚೋದನಕಾರಿ ಮಾತು ಎಂದು ಸ್ವಾಧ್ವಿ ವಿರುದ್ಧ ಉದ್ಯಮಿ ತೆಹಸೀನ್ ಪೂನಾವಾಲಾ ಟ್ವೀಟ್ ಮೂಲಕ ಎಸ್ಪಿ ಮಿಥುನ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸಿರುವುದರಿಂದ, ಅದನ್ನು ಕಳುಹಿಸುವ ವ್ಯಕ್ತಿಯ ದೃಢೀಕರಣವನ್ನು ಪರಿಶೀಲಿಸಬೇಕು. ಅಲ್ಲದೆ, ಸುಪ್ರೀಂ ಕೋರ್ಟ್‌ನ ಲಲಿತಾ ಕುಮಾರಿ ತೀರ್ಪಿನ ಪ್ರಕಾರ, ಸ್ವೀಕರಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಪ್ರಾಥಮಿಕ ತನಿಖೆ ನಡೆಸಲು ಅಥವಾ ಎಫ್‌ಐಆರ್ ದಾಖಲಿಸಲು ಸೆಕ್ಷನ್ 154 ರ ಅಡಿಯಲ್ಲಿ ದೂರುದಾರ ನೇರವಾಗಿ ಬಂದು ದೂರು ದಾಖಲಿಸಬೇಕು. ದೂರುದಾರ ತೆಹಸೀನ್ ಪೂನಾವಾಲಾ ಇಂದು ಬೆಳಗ್ಗೆ (ಡಿ.28 ರಂದು) 11 ಗಂಟೆಯ ಒಳಗೆ ಠಾಣೆಗೆ ಬಂದು ದೂರು ದಾಖಲಿಸಿ ಎಂದು ನೋಟಿಸ್‌ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next