Advertisement

ಸಮಸ್ಯೆಗಳಿದ್ದರೆ ನೇರವಾಗಿ ಸಂಪರ್ಕಿಸಿ

09:41 PM Nov 13, 2020 | Suhan S |

ದಾಂಡೇಲಿ: ಊರಿನ ಶಾಂತಿ ಸೌಹಾರ್ದತೆಯಲ್ಲಿ ಪೊಲೀಸರ ಜೊತೆ ನಾಗರಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬದರಿನಾಥ್‌ ಹೇಳಿದರು. ಅವರು ನಗರದ ಗ್ರಾಮೀಣ ಠಾಣೆ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸ್ಥಳೀಯವಾಗಿ ಸುಗಮ ಸಂಚಾರಕ್ಕೆ ಸಂಬಂಧಪಟ್ಟಂತೆ ಟ್ರಾಫಿಕ್‌ ಸಮಸ್ಯೆಯನ್ನು ಸಾರ್ವಜನಿಕರ ಸಹಕಾರದಲ್ಲಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೋನಸ್‌ಸಮಯದಲ್ಲಷ್ಟೆ ಅಲ್ಲದೇ ಯಾವುದೇ ಸಮಯದಲ್ಲೂ ಜೂಜಾಟ ನಡೆದಲ್ಲಿ, ನೇರವಾಗಿ ನನ್ನ ಗಮನಕ್ಕೆ ತಂದರೆಮೂಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನಾಗರಿಕರ ಮತ್ತು  ಸಮಾಜದ ಹಿತಕ್ಕಾಗಿ ಇಲಾಖೆ ಕಂಕಣಬದ್ಧವಾಗಿದೆ. ವಾಹನಗಳ ಪಾರ್ಕಿಂಗ್‌ ಬಗ್ಗೆಯು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಜನಮೆಚ್ಚುವ ಕಾರ್ಯ ಮಾಡಿರುವುದನ್ನು ಶ್ಲಾಘಿಸಿದರು.

ನಗರಸಭಾ ಸದಸ್ಯ ಆದಂ ದೇಸೂರು, ಮಾಜಿ ಸದಸ್ಯರಾದ ಅಬ್ದುಲ್‌ ವಹಾಬ್‌ ಮುನ್ನಾ, ತಸ್ವರ ಸೌದಗಾರ, ಪತ್ರಕರ್ತಸಂದೇಶ್‌ ಜೈನ್‌, ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಸಂತೋಷ ಸೋಮನಾಚೆ, ಆದಿಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಾಡಿಗೇರ, ಮೌಳಂಗಿ ದಲಿತ ಸಂಘಟನೆ ಮುಖಂಡ ಸಹದೇವಕಾಂಬಳೆ, ಕಾಂಗ್ರೆಸ್‌ ಮುಖಂಡ ದಾದಾಪೀರ್‌ ನದಿಮುಲ್ಲಾ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಷ್ಣುನಾಯರ್‌ ಮೊದಲಾದವರು ಸಲಹೆ ನೀಡಿದರು. ಡಿವೈಎಸ್ಪಿ ಶಿವಾನಂದ ಚಲವಾದಿ, ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸೈಗಳಾದ ಹನುಮಂತ ಬಿರದಾರ, ಯಲ್ಲಪ್ಪಾ ಎಸ್‌, ಸತ್ಯಪ್ಪ ಹುಕ್ಕೇರಿ, ಮಹಾದೇವಿ ನಾಯ್ಕವಾಡಿ ಮೊದಲಾದವರು ಉಪಸ್ಥಿತರಿದ್ದರು.

ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಸೇವಕರು, ರಾಜಕೀಯಮುಖಂಡರು ಉಪಸ್ಥಿತರಿದ್ದರು. ಸಿಪಿಐ ಪ್ರಭು ಗಂಗನಹಳ್ಳಿ ಸ್ವಾಗತಿಸಿದರು. ಹನುಮಂತ ಬಿರದಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next