Advertisement

ಬೆಂಗಳೂರು:ಹಲ್ಲೆಗೆ ಮುಂದಾದ ಕಳ್ಳರಿಬ್ಬರ ಕಾಲಿಗೆ ಪೊಲೀಸ್‌ ಗುಂಡು

12:01 PM Sep 22, 2017 | |

 ಬೆಂಗಳೂರು: ಕಳ್ಳತನಕ್ಕೆ ಯತ್ನಿಸುತ್ತಿದ್ದ ಕಳ್ಳರು ಹಲ್ಲೆಗೆ ಮುಂದಾದಾಗ ಪೊಲೀಸರು  ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. 

Advertisement

ಖಚಿತ ಮಾಹಿತಿಯ ಮೇರಗೆ ವಿದ್ಯಾರಣ್ಯಪುರ ಪೊಲೀಸರು ಇನ್ಸ್‌ಪೆಕ್ಟರ್‌ ಪುನೀತ್‌, ವಿದ್ಯಾರಣ್ಯಪುರ ಎಸ್‌ಐ ಅಣ್ಣಯ್ಯ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದಿದ್ದು ಈ ವೇಳೆ ಮೂವರು ಕಳ್ಳರು ಶೆಟರ್‌ ಮುರಿದು ಕಳ್ಳತನ ನಡೆಸುತ್ತಿದ್ದರು. ಬಂಧಿಸಲು ಮುಂದಾದಾಗ ಅಣ್ಣಯ್ಯ ಮೇಲೆ ಇರಿಯಲು ಮುಂದಾಗಿದ್ದಾರೆ. ಕೂಡಲೇ ಆತ್ಮರಕ್ಷಣೆಗೆ ಕಳ್ಳರಿಬ್ಬರ ಕಾಲಿಗೆ ಗುರಿಯಾಗಿ ಗುಂಡು ಹಾರಿಸಿದ್ದಾರೆ. ಇನ್ನೋರ್ವನನ್ನು  ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. 

ಗುಂಡೇಟು ತಿಂದ ಖದೀಮ ಕಳ್ಳರು ನಾರಾಯಣ ಸ್ವಾಮಿ, ಅಶೋಕ್‌ ಎನ್ನುವವರಾಗಿದ್ದು ಇನ್ನೋರ್ವ ಬಂಧಿತ ಸುಧಾಕರ ಎಂದು ಪೊಲೀಸರು ತಿಳಿಸಿದ್ದಾರೆ. 

ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಹೇಳಿದರೂ ಬಗ್ಗದಿದ್ದಾಗ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪಶ್ಚಿವ ವಲಯ ಡಿಸಿಪಿ ಶಿವಕುಮಾರ್‌ ತಿಳಿಸಿದ್ದಾರೆ. 

ಮೂವರ ವಿರುದ್ಧ ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. 

Advertisement

ಗಾಯಗೊಂಡಿರುವ ಕಳ್ಳರಿಬ್ಬರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next