Advertisement

ಚುನಾವಣಾ ಕರ್ತವ್ಯದಲ್ಲಿದ್ದ ಪೇದೆ ಸಾವು : ಊಟ ತರಲು ಹೋದವ ಮಸನ ಸೇರಿದ

05:04 PM Sep 03, 2021 | Team Udayavani |

ಧಾರವಾಡ:ಚುನಾವಣಾ ಕರ್ತವ್ಯದ ವೇಳೆ ರಸ್ತೆ ಅಪಘಾತ ಸಂಭವಿಸಿ ಪೊಲೀಸ್ ಪೇದೆಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ಶುಕ್ರವಾರ (ಸೆ.03) ಮಧ್ಯಾಹ್ನ ನಡೆದಿದೆ.

Advertisement

ಧಾರವಾಡ ಹೊರವಲಯದ ಕೆಎಂಎಫ್ ಬಳಿ ನಡೆದ ಅಪಘಾತದಲ್ಲಿ ಪೊಲೀಸ ಪೇದೆ ನಿಂಗಪ್ಪ ಭೂಷಣ್ಣವರ (28) ಸಾವನ್ನಪ್ಪಿದ್ದಾರೆ.

ಧಾರವಾಡ ನಗರದಿಂದ ನವಲೂರ ಗ್ರಾಮಕ್ಕೆ ಪೊಲೀಸರಿಗೆ ಊಟ ತೆಗೆದುಕೊಂಡು ಹೋಗುತಿದ್ದ

ವೇಳೆ ಹಿಂದಿನಿಂದ ಬಂದ ಬೊರವೆಲ್ ಕೊರೆಯುವ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪೇದೆ ಲಾರಿ ಚಕ್ರದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಸಂಚಾರಿ ಪೊಲೀಸ್ ಠಾಣಾ ಸಮೀಪವೆ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next