Advertisement

‌ಶಂಕಿತ ಉಗ್ರನನ್ನು ಬಂಟ್ವಾಳಕ್ಕೆ ಕರೆತಂದ ಪೊಲೀಸರು: ಈ ಜಾಗಗಳಲ್ಲಿ ಬ್ಲಾಸ್ಟಿಂಗ್ ರಿಹರ್ಸಲ್?

06:09 PM Sep 21, 2022 | Team Udayavani |

ಬಂಟ್ವಾಳ/ ಮಂಗಳೂರು  ಶಿವಮೊಗ್ಗದಲ್ಲಿ ಬಂಧನವಾಗಿ ಪೊಲೀಸ್ ವಶದಲ್ಲಿರುವ ಶಂಕಿತ ಉಗ್ರ ಮಾಝ್ ಅಹ್ಮದ್ ನನ್ನು ಬುಧವಾರ ಪೊಲೀಸರು ಬಂಟ್ವಾಳಕ್ಕೆ ಕರೆ ತಂದಿದ್ದಾರೆ.

Advertisement

ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್  ನೇತೃತ್ವದ ತಂಡ ಶಂಕಿತ ಉಗ್ರನನ್ನು ಬಂಟ್ವಾಳಕ್ಕೆ ಕರೆ ತಂದಿದ್ದು, ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರ ಸಮೀಪದ ಸುಲ್ತಾನ್ ಕಟ್ಟೆ ಅಗ್ರಹಾರ ಬಳಿ‌ ಮಹಜರು ನಡೆಸುತ್ತಿದ್ದಾರೆ.

ಮಹಜರು ವೇಳೆ ಶ್ವಾನ ದಳ ಮತ್ತು ಬಾಂಬ್ ಸ್ಜ್ವಾಡ್ ಮೂಲಕ ಪರಿಶೀಲನೆ ನಡೆಸಲಾಗಿದ್ದು, ಈ ಜಾಗಗಳಲ್ಲಿ ಬಾಂಬ್ ಬ್ಲಾಸ್ಟಿಂಗ್ ರಿಹರ್ಸಲ್ ಮಾಡುತ್ತಿದ್ದ ಎನ್ನಲಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next