Advertisement

ಸಿಕಂದರಾಬಾದ್ ಹಿಂಸಾಚಾರ : ಮಾಸ್ಟರ್ ಮೈಂಡ್ ಅವುಲಾ ಸುಬ್ಬಾ ರಾವ್ ಬಂಧನ

08:11 PM Jun 18, 2022 | Team Udayavani |

ಸಿಕಂದರಾಬಾದ್ : ಶುಕ್ರವಾರ ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ಅವುಲಾ ಸುಬ್ಬಾ ರಾವ್ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರಪ್ರದೇಶದ ನರಸರಾವ್‌ಪೇಟೆ ಹಾಗೂ ಹೈದರಾಬಾದ್‌ ಮತ್ತಿತರೆಡೆ ಸಾಯಿ ಡಿಫೆನ್ಸ್‌ ಅಕಾಡೆಮಿ ನಡೆಸುತ್ತಿರುವ ಸುಬ್ಬಾ ರಾವ್‌, ಶುಕ್ರವಾರ ಅಗ್ನಿಪಥ್‌ ಯೋಜನೆ ಅನುಷ್ಠಾನದ ಕುರಿತು ಸಿಕಂದರಾಬಾದ್‌ ರೈಲು ನಿಲ್ದಾಣದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದಾರೆ.

ಸುಬ್ಬಾ ರಾವ್ ಅವರು ತಮ್ಮ ಪ್ರಚೋದನಕಾರಿ ಭಾಷಣಗಳ ಮೂಲಕ ಪ್ರತಿಭಟನಾಕಾರರನ್ನು ಪ್ರಚೋದಿಸಿದರು ಮತ್ತು ಅಗ್ನಿಪಥ್ ಯೋಜನೆಯ ವಿರುದ್ಧ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ.

ಸುಬ್ಬಾ ರಾವ್ ಅವರು ಹೈದರಾಬಾದ್‌ನಿಂದ ನರಸರಾವ್‌ಪೇಟೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರನ್ನು ಪ್ರಚೋದಿಸಲು ಇತರ ಕೆಲವು ಕೋಚಿಂಗ್ ಸಂಸ್ಥೆಗಳ ಮಾಲೀಕರು ವಹಿಸಿದ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಪೊಲೀಸರು ಯೋಜಿಸುತ್ತಿದ್ದಾರೆ.

ಹೈದರಾಬಾದ್‌ನ ಸಿಕಂದರಾಬಾದ್ ರೈಲು ನಿಲ್ದಾಣದ ಆವರಣವನ್ನು ಶುಕ್ರವಾರದಂದು ಗುಂಪೊಂದು ಧ್ವಂಸಗೊಳಿಸಿತ್ತು ಮತ್ತು ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹಚ್ಚಿ, ರೈಲಿನ ಗಾಜುಗಳನ್ನು ಧ್ವಂಸಗೊಳಿಸಿ ಹಳಿಗಳ ಮೇಲೆ ದ್ವಿಚಕ್ರ ವಾಹನವನ್ನು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಬ್ಯಾಗ್‌ಗಳನ್ನು ಸುಟ್ಟು ಹಾಕಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next