Advertisement

ಆಟೋ ಓಡಾಟದ ಮೇಲೆ ನಿಗಾ ಇಟ್ಟು ಬಲೆ ಹಾಕಿದ ಪೊಲೀಸರು: ವಾರದಲ್ಲೇ ಆಟೋ ಸಮೇತ ಕಳ್ಳ ಸೆರೆ

09:00 AM Jan 12, 2022 | Team Udayavani |

ಸಿಂಧನೂರು: ನಗರ ವ್ಯಾಪ್ತಿಯಲ್ಲಿ ಆಟೋವೊಂದು ಕಳವಾದ ಪ್ರಕರಣವನ್ನು ಪೊಲೀಸರು ಏಳೇ ದಿನದಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

Advertisement

ರಾಯಚೂರು ತಾಲೂಕಿನ ಈರೇಶ ತಿಪ್ಪಯ್ಯ ಎಂಬ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಆತ ಕಳವು ಮಾಡಿದ್ದ  ಆಟೋವನ್ನು ಜಪ್ತಿ‌ ಮಾಡಿದ್ದಾರೆ‌.

ಜಪ್ತಿ ವಾಹನದ ಮೌಲ್ಯ 50 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ವಾಹನ ಕಳ್ಳತನದ‌ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶದನಲ್ಲಿ ಸಿಪಿಐ ಉಮೇಶ ಕಾಂಬಳೆ, ಪಿಎಸ್ ಐ ಸೌಮ್ಯ, ಸಿಬ್ಬಂದಿ ಸಂಗನಗೌಡ, ಆದಯ್ಯ, ಅನಿಲ್,‌ ಕುಮಾರ್, ಚಾಂದ್ ಪಾಷಾ, ಶರಣಪ್ಪ, ದ್ಯಾವಣ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ನಗರದಲ್ಲಿ ಜನವರಿ 4, 2022 ರಂದು ಕಳವಾಗಿದ್ದ ಆಟೋವನ್ನು ಪತ್ತೆ ಹಚ್ಚಿ, ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಏಳು ದಿ‌ನದಲ್ಲಿ ಪ್ರಕರಣ ಬೇಧಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next