Advertisement

ರಾಹುಲ್‌, ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ಧಾಳಿ

06:15 AM May 10, 2018 | Team Udayavani |

ಚಿಕ್ಕಮಗಳೂರು ಹಾಗೂ ಕೋಲಾರಗಳಲ್ಲಿ ಬೃಹತ್‌ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಹುಲ್‌ ಹಾಗೂ ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದರು.  ಕಾಂಗ್ರೆಸ್‌ ಈಗ ಜನರ ಪಕ್ಷವಾಗಿ ಉಳಿದಿಲ್ಲ. ಅದು ಒಂದು ಕುಟುಂಬದ ಪಕ್ಷವಾಗಿದೆ ಎಂದರು. 

Advertisement

ಬೆಳಗಾವಿಯಲ್ಲಿ ಮಾತನಾಡಿ, ಚುನಾವಣೆ ಪ್ರಕ್ರಿಯೆ ಆರಂಭವಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಭಾವಚಿತ್ರವುಳ್ಳ ಬಾಕ್ಸ್‌ಗಳಲ್ಲಿ ಕುಕ್ಕರ್‌ಗಳು ಲಾರಿ ತುಂಬಾ ಸಿಕ್ಕಿದೆ. ಇದರಲ್ಲಿ ಕಾಂಗ್ರೆಸ್‌ನವರು ಏನು ಬೇಯಿಸುವವರಿದ್ದರು ಎಂಬುದು ಗೊತ್ತಾಗಲಿಲ್ಲ. ಕುಕ್ಕರ್‌ ಹಂಚಿ ಮತ ಪಡೆಯುವುದು ಪವಿತ್ರ ಚುನಾವಣೆಯೇ ಎಂದು ಪ್ರಶ್ನಿಸಿದರು. ಇದಕ್ಕೂ ಮೊದಲು ಕೋಲಾರದಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಯರಗೋಳ್‌, ಎತ್ತಿನಹೊಳೆ ಯೋಜನೆಗಳನ್ನು ಜಾರಿಗೊಳಿಸುವ ವಾಗ್ಧಾನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next