ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಫೆ.26) 41,000 ಸಾವಿರ ಕೋಟಿ ರೂಪಾಯಿ ವೆಚ್ಚದ 553 ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ದಿಗಾಗಿ (ರೈಲ್ವೆ ಓವರ್ ಬ್ರಿಡ್ಜ್, ರೋಡ್ ಅಂಡರ್ ಬ್ರಿಡ್ಜ್) ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ:Crime: ವೃದ್ಧೆಯ ಕೊಲೆಗೈದು ಮೃತದೇಹ ತುಂಡು ಮಾಡಿ ಡ್ರಂನಲ್ಲಿಟ್ಟ ಹಂತಕರು
ದೇಶದ ರೈಲ್ವೆ ಮೂಲಭೂತ ಸೌಕರ್ಯದ ಅಭಿವೃದ್ಧಿಯ ಮುಖ್ಯ ಉದ್ದೇಶ ಈ ಯೋಜನೆಯದ್ದಾಗಿದೆ. ಇಂದು ನಮ್ಮ ರೈಲ್ವೆಯ ಐತಿಹಾಸಿಕ ದಿನವಾಗಿದೆ. ಸುಮಾರು 2,000 ರೈಲ್ವೆ ಮೂಲಭೂತ ಸೌಕರ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದು, ಇದನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಶೇರ್ ಮಾಡಿದ್ದಾರೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 553 ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಪಡಿಸಲಾಗುವುದು. ಈ ಎಲ್ಲಾ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಗಳ ಮೂಲಕ ರೈಲ್ವೆ ಪ್ರಯಾಣಿಕರಿಗೆ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.
ಒಡಿಶಾದಲ್ಲಿ 900 ಕೋಟಿ ರೂಪಾಯಿ ಮೊತ್ತದ 21 ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಈಸ್ಟ್ ಕೋಸ್ಟ್ ರೈಲ್ವೆ ಜನರಲ್ ಮ್ಯಾನೇಜರ್ ಮನೋಜ್ ಶರ್ಮಾ ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿ ಬಿಮ್ಲಗಢ್, ಜರೋಲಿ, ರೈರಂಗಪುರ್, ಪನ್ಪೋಶ್, ಬಾಲೇಶ್ವರ್, ಬೆಟ್ನೋಟಿ, ಸಂಬಲ್ಪುರ್ ಸಿಟಿ, ಝಾರ್ಸುಗುಡ ರಸ್ತೆ, ತಿತ್ಲಗಢ್, ಕೆಸಿಂಗಾ, ರಾಯಗಢ್, ಪರಲಖೆಮುಂಡಿ, ಕೊರಾಪುಟ್, ಜೇಪೋರ್, ತಲ್ಜೆರ್, ರಘುನಾಥಪುರ, ಪರಾದೀಪ್, ಪಾರದೀಪ್, ಮುಂತಾದ ನಿಲ್ದಾಣಗಳು ಸೇರಿವೆ ಎಂದು ವರದಿ ತಿಳಿಸಿದೆ.