Advertisement

40 ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಅಂತಿಮ ನಮನ;ಭಾವುಕ 

03:43 PM Feb 15, 2019 | |

ಹೊಸದಿಲ್ಲಿ: ಆವಂತಿಪೋರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ವೀರ ಯೋಧರ ಪಾರ್ಥೀವ ಶರೀರಗಳನ್ನು ಶುಕ್ರವಾರ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. 

Advertisement

ಭಾವುಕರಾಗಿದ್ದ ಪ್ರಧಾನಿ ಮೋದಿ ಯೋಧರಿಗೆ ಶಿರಬಾಗಿ ನಮಿಸಿ ,ಪ್ರದಕ್ಷಿಣೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ನೀರವ ಮೌನ ಆವರಿಸಿತ್ತು. 

ಸಿಆರ್‌ಪಿಎಫ್ 40 ಮಂದಿ ಯೋಧರು ಹುತಾತ್ಮರಾಗಿರುವುದನ್ನು ಧೃಡಪಡಿಸಿದ್ದು, 36 ಮಂದಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದ್ದು, ಇನ್ನು ನಾಲ್ವರ ಗುರುತು ಪತ್ತೆ ಹಚ್ಚಬೇಕಷ್ಟೇ. 

ನಾಳೆ ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಾಳಿ ಕುರಿತಾಗಿ ಮಹತ್ವದ ಸರ್ವ ಪಕ್ಷ ಸಭೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next