Advertisement

PM Modi ‘ವಿಷದ ಹಾವು’ಇದ್ದಂತೆ..; ಅದು ನನ್ನ ಉದ್ದೇಶವಾಗಿರಲಿಲ್ಲ ಎಂದ ಖರ್ಗೆ

07:14 PM Apr 27, 2023 | Team Udayavani |

ಗದಗ: ಮೋದಿ ಅಂದ್ರೆ ವಿಷಯದ ಹಾವಿದ್ದಂಗೆ. ಅದು ವಿಷ ಹೌದೋ ಅಲ್ಲವೋ ಅಂತಾ ನೆಕ್ಕಿ ನೋಡಿದ್ರೆ ಸತ್ತಂತೆ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ಸಿನ ಬಹಿರಂಗ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರ ವಿಚಾರಧಾರೆಗಳು ಬಹಳ ಕೆಟ್ಟದಾಗಿರುವುದರಿಂದ ಇಡೀ ದೇಶ ಹಾಳಾಗುತ್ತಿದೆ. ಒಂದು ಲೀಟರ್ ಹಾಲಲ್ಲಿ ಗೊಬ್ಬರ ಹಾಕಿದರೆ ಸಾಕು ಅದು ಕೆಟ್ಟು ಹೋಗುತ್ತದೆ. ಅದಕ್ಕೆ ದೊಡ್ಡ ಪದಾರ್ಥ ಬೇಕಿಲ್ಲ. ಹಾಗೇಯೆ ನಿನೋಬ್ಬನೇ ಸಾಕು ದೇಶ ಹಾಳು ಮಾಡೋಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಒಂದು ಕಡೆ 56 ಇಂಚಿನ ಛಾತಿಯಿದೆ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದೆಡೆ ಮೋದಿ ಒಂದು ಕಡೆ, ವಿರೋಧ ಪಕ್ಷದವರು ಒಂದು ಕಡೆ. ಮೋದಿನೇ ಸಾಕು ಎಲ್ಲರಿಗೆ ಎಂದು ಹೇಳುತ್ತಾನೆ. ಹೌದು ದೇಶವನ್ನು ಮುಗಿಸೋಕೆ ಮೋದಿ ಒಬ್ಬರೆ ಸಾಕು ಎಂದರು.

ಉಲ್ಟಾ ಹೊಡೆದ ಖರ್ಗೆ
ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯ ನಂತರ ರೋಣ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಯನ್ನೇ ಉಲ್ಟಾ ಹೊಡೆದರು. ಮೋದಿ ವಿಷದ ಹಾವು ಇದ್ದಂತೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹಾಗೆ ಹೇಳಿಲ್ಲ, ಬಿಜೆಪಿ ಒಂದು ಹಾವು ಇದ್ದಂಗೆ, ಸ್ವಲ್ಪ ನೆಕ್ಕಿ ನೋಡ್ತೀವಿ ಅಂದ್ರೆ ಅಲ್ಟಿಮೇಟ್ಲಿ ಡೆತ್ ಅಂತ ಹೇಳಿದ್ದೆನೆ. ಮೋದಿ ಅವರಿಗೆ ಹೇಳಿಲ್ಲ. ವೈಯಕ್ತಿಕವಾಗಿ ನಾನು ಯಾರಿಗೂ ಹೇಳುವುದಿಲ್ಲ. ಯಾರ ಬಗ್ಗೆಯೂ ಬಗ್ಗೆಯೂ ನನಗೆ ಅಸೂಯೆ ಇಲ್ಲ. ಬಿಜೆಪಿ ಐಡಿಯಾಲಾಜಿ ಒಂದು ವಿಷದಂತಿದೆ. ಆ ಐಡಿಯಾಲಾಜಿ ನೀವು ಸಪೋರ್ಟ್ ಮಾಡಿದ್ರೆ, ನೀವು ನೆಕ್ಕಿ ನೋಡ್ತೀವಿ ಅಂದ್ರೆ ಸಾವು ಖಚಿತ ಎಂಬ ಅರ್ಥದಲ್ಲಿ ಹೇಳಿದ್ದೇನೆ ಎಂದು ಸಭೆಯಲ್ಲಿ ಮಾತನಾಡಿದ ಮಾತುಗಳನ್ನು ಬದಲಿಸಿದರು.

Advertisement

”ಪ್ರಧಾನಿ ಮೋದಿ ಅವರೊಂದಿಗಿನ ನಮ್ಮ ಹೋರಾಟ ವೈಯಕ್ತಿಕ ಹೋರಾಟವಲ್ಲ. ಅದೊಂದು ಸೈದ್ಧಾಂತಿಕ ಹೋರಾಟ. ನನ್ನ ಉದ್ದೇಶ ಯಾರ ಮನಸ್ಸಿಗೂ ನೋವಾಗಿರಲಿಲ್ಲ ಮತ್ತು ತಿಳಿದೋ ತಿಳಿಯದೆಯೋ ಯಾರದೋ ಭಾವನೆಗೆ ಧಕ್ಕೆಯಾದರೆ ಅದು ನನ್ನ ಉದ್ದೇಶವಾಗಿರಲಿಲ್ಲ.” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next