Advertisement

ವೆಂಕಯ್ಯ ನಾಯ್ಡು ಅವರ ಸೇವೆ ದೇಶಕ್ಕೆ ಶಾಶ್ವತ ಮಾರ್ಗದರ್ಶನ: ಪ್ರಧಾನಿ ಮೋದಿ

02:16 PM Aug 08, 2022 | Team Udayavani |

ನವದೆಹಲಿ: ರಾಜ್ಯಸಭೆ ಸೋಮವಾರ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು, ”ಉಪರಾಷ್ಟ್ರಪತಿ ಮತ್ತು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರ ಸೇವೆ ಕೊನೆಗೊಳ್ಳಬಹುದು, ಆದರೆ ಅವರ ಪರಂಪರೆಯು ದೇಶಕ್ಕೆ ಶಾಶ್ವತವಾಗಿ ಮಾರ್ಗದರ್ಶನ ನೀಡುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Advertisement

ವೆಂಕಯ್ಯ ನಾಯ್ಡು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅವರ ಐದು ವರ್ಷಗಳ ಅವಧಿಯಲ್ಲಿ “ಸದನದ ಉತ್ಪಾದಕತೆ ಶೇಕಡಾ 70 ರಷ್ಟು ಹೆಚ್ಚಾಗಿದೆ” ಎಂದರು.

ನಾಯ್ಡು ಅವರು ‘ಸರ್ಕಾರ ಪ್ರಸ್ತಾಪಿಸಲಿ, ವಿರೋಧ ಪಕ್ಷದವರು ವಿರೋಧಿಸಲಿ, ಸದನ ವಿಲೇವಾರಿ ಮಾಡಲಿ’ ಎಂಬ ತತ್ವದಡಿ ಕೆಲಸ ಮಾಡಿದರು.ಅವರು ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಂಡಿರುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣೆಯಿಂದ ನಿರ್ವಹಿಸಿದರು.ನಮ್ಮ ಉಪಾಧ್ಯಕ್ಷರಾಗಿ, ನೀವು ಯುವ ಕಲ್ಯಾಣಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದೀರಿ. ನಿಮ್ಮ ಬಹಳಷ್ಟು ಕಾರ್ಯಕ್ರಮಗಳು ಯುವ ಶಕ್ತಿಯ ಮೇಲೆ ಕೇಂದ್ರೀಕೃತವಾಗಿವೆ,” ಎಂದರು.

ನಾಯ್ಡು ಅವರ ಐದು ವರ್ಷಗಳ ಅವಧಿ ಆಗಸ್ಟ್ 10 ರಂದು ಪೂರ್ಣಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next