Advertisement
ಕುಂದಾಪುರ: ಯೋಧ ಬಸೂÅರಿನ ಪ್ರದೀಪ್ ಖಾರ್ವಿಯವರ ಯಶೋಗಾಥೆ ಆರಂಭ ವಾಗುವುದೇ ವಿಶೇಷ ಪುಟಗಳಿಂದ.
Related Articles
Advertisement
ಬಸೂÅರು ವಿಲಾಸಕೇರಿಯ ಜನಾರ್ದನ ಖಾರ್ವಿ ಹಾಗೂ ಗೌರಿ ಖಾರ್ವಿ ದಂಪತಿಯ ನಾಲ್ವರು (ಇಬ್ಬರು ಗಂಡು, ಇಬ್ಬರು ಹೆಣ್ಣು) ಮಕ್ಕಳ ಪೈಕಿ ಮೂರನೆಯವರು ಪ್ರದೀಪ್. ಬಸೂÅರಿನ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಿವೇದಿತಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಹಾಗೂ ಪ.ಪೂ. ಶಿಕ್ಷಣವನ್ನು ಬಸೂÅರಿನ ಶಾರದಾ ಕಾಲೇಜಿನಲ್ಲಿ ಪೂರೈಸಿದರು.
ಜನ್ಮದಿನದಂದೇ ಸೇನೆಗೆ ನೇಮಕಪ್ರದೀಪ್ ಖಾರ್ವಿ 1988ರ ಎ. 15ರಂದು ಜನಿಸಿದ್ದು, ಜನ್ಮದಿನ ಅಂದರೆ 2011ರ ಎ.15 ರಂದು ಸೇನೆಗೆ ನೇಮಕಗೊಂಡು ತಮ್ಮ ಬದುಕಿನ ಅತ್ಯುನ್ನತ ಕನಸನ್ನು ಈಡೇರಿಸಿಕೊಂಡರು. ಹಾಗಾಗಿ ಆ ದಿನಕ್ಕೆ ಪ್ರತಿವರ್ಷವೂ ಇಮ್ಮಡಿ (ಡಬ್ಬಲ್) ಸಂಭ್ರಮ. ವಿವಿಧೆಡೆ ಸೇವೆ
ಪ್ರದೀಪ್ ಅವರು ಗಡಿ ಭದ್ರತಾ ಪಡೆಯ ವಿವಿಧೆಡೆ 7 ವರ್ಷ ದುಡಿದಿದ್ದಾರೆ. 2011 ರಲ್ಲಿ ಯಲಹಂಕದಲ್ಲಿ 9 ತಿಂಗಳು ತರಬೇತಿ. ಅಲ್ಲಿಂದ ಎರಡೂವರೆ ವರ್ಷ ಛತ್ತೀಸ್ಗಢದ ರಾಯ್ಪುರದಲ್ಲಿ ನಿಯೋಜನೆ. 2014ರಿಂದ ಗಡಿ ರಾಜ್ಯ ಜಮ್ಮುವಿನಲ್ಲಿ ಸೇವೆ ಸಲ್ಲಿಕೆ. ಸದ್ಯ ಜಮ್ಮುವಿನ ಸಾಂಬಾ ಸೆಕ್ಟರ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಕ್ಸಲ್ ದಾಳಿಯ ನೆನಪು
ಛತ್ತೀಸ್ಗಢದಲ್ಲಿ ನಿಯೋಜನೆಗೊಂಡ 2ನೇ ದಿನ ನಕ್ಸಲ್ ದಾಳಿಗೆ 89 ಬೆಟಾಲಿಯನ್ ವಾಹನ ಬ್ಲಾಸ್ಟ್ ಆಗಿದ್ದ ನೆನಪು ಈಗಲೂ ಕಣ್ಣ ಮುಂದೆ ಬರುತ್ತದೆ ಎನ್ನುವ ಪ್ರದೀಪ್, 2016ರಲ್ಲಿ 2 ಸಲ ಗುಂಡಿನ ದಾಳಿಯಾಗಿದ್ದು, ಆ ಸಮಯದಲ್ಲಿ 3 ದಿನ ಸಂಪರ್ಕದಲ್ಲೇ ಇರಲಿಲ್ಲ. 3 ದಿನ ಹೊಟ್ಟೆಗೆ ಏನೂ ಇಲ್ಲದೇ ಇದ್ದೆವು. ಆದರೂ ದೇಶ ಕಾಯುವ ಕೆಲಸ ಬಹಳ ಶ್ರೇಷ್ಠವಾದದ್ದು ಎನ್ನುತ್ತಾರೆ ಅವರು. ಏಳನೇ ತರಗತಿಯಲ್ಲಿದ್ದಾಗ ಸೇನೆಯಲ್ಲಿದ್ದ ಮಾವ ಗಣಪತಿ ಖಾರ್ವಿಯವರು ಒಂದು ಆಟಿಕೆ ಪಿಸ್ತೂಲು ನೀಡಿದ್ದರು. ಆಗಲೇ ನಾನು ಕೂಡ ಸೇನೆಗೆ ಸೇರಬೇಕು ಎನ್ನುವ ಆಸೆ ಬೆಳೆಯಿತು. ನಾನೀಗ ಸೇನೆಯಲ್ಲಿದ್ದೇನೆ ಅಂದರೆ ಅದಕ್ಕೆ ಮಾವನೇ ಸ್ಫೂರ್ತಿ. ನಾನೊಬ್ಬ ಯೋಧನಾಗಿರುವುದಕ್ಕೆ, ಭಾರತಾಂಬೆಯ ಸೇವೆ ಮಾಡುತ್ತಿರುವುದಕ್ಕೆ ತುಂಬಾ ಹೆಮ್ಮೆಯಿದೆ. ಎಲ್ಲರಿಗೂ ಈ ಅವಕಾಶ ಸಿಗದು.
– ಪ್ರದೀಪ್ ಖಾರ್ವಿ, ಯೋಧ, ವಿಲಾಸಕೇರಿ