Advertisement

ಪ್ಲಾಸ್ಟಿಕ್‌ ಶವಯಾತ್ರೆ

06:22 PM Oct 05, 2019 | Suhan S |

ತುರುವೇಕೆರೆ: ಪಟ್ಟಣದಲ್ಲಿ ಪ್ಲಾಸ್ಟಿಕ್‌ ನಿಗ್ರಹ ಮಾಡ ಬೇಕೆಂದು ಪಣ ತೊಟ್ಟಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ ನೇತೃತ್ವದಲ್ಲಿ ಪ್ಲಾಸ್ಟಿಕ್‌ ಶವ ಯಾತ್ರೆ ನಡೆಯಿತು. ಬಹುತೇಕ ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್‌ ಶವಯಾತ್ರೆ ನಡೆಸಿ ಜಾಗೃತಿ ಮೂಡಿಸಲಾಯಿತು. ಪರಿಸರ ಸ್ನೇಹಿ ಹಸಿರು ಎಲೆ, ಪೇಪರ್‌ ಲೋಟ ಸೇರಿ ವಿವಿಧ ವಸ್ತುಗಳನ್ನು ಮತ್ತೂಂದು ಗಾಡಿಯಲ್ಲಿ ಕೊಂಡೊಯ್ದು ಅರಿವು ಮೂಡಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್‌ ಮಹೇಶ್‌, ಮಧು, ರವಿಕುಮಾರ್‌, ನದೀಂ, ಚಿದಾನಂದ್‌, ಭಾಗ್ಯಮ್ಮ, ಪಂಚಾಯಿತಿ ಸಿಬ್ಬಂದಿ ದೇವರಾಜು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next